ಶಾಲಾ ಪ್ರವಾಸಕ್ಕೆಂದು ಟಾಟಾ ಏಸ್‍ನಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿದ ಶಿಕ್ಷಕರು

ದಾವಣಗೆರೆ: ಶಾಲಾ ಪ್ರವಾಸಕ್ಕೆಂದು 2 ಟಾಟಾ ಏಸ್‍ನಲ್ಲಿ ಶಿಕ್ಷಕರು ಶಾಲಾ ಮಕ್ಕಳನ್ನು ಕುರಿಗಳಂತೆ ತುಂಬಿದ ಅಮಾನವೀಯ ಘಟನೆ ದಾವಣಗೆರೆಯ ಶ್ರೀ ಸತ್ಯ ಸಾಯಿ ಶಾಲೆಯಲ್ಲಿ ನಡೆದಿದೆ.

ಶಾಲಾ ಆಡಳಿತ ಮಂಡಳಿ ಶಾಲಾ ಪ್ರವಾಸಕ್ಕೆ 2 ಟಾಟಾಏಸ್ ತರಿಸಿಕೊಂಡಿದ್ದರು. ಶಾಲಾ ಶಿಕ್ಷಕರು ಟಾಟಾ ಏಸ್‍ನಲ್ಲಿ 30 ರಿಂದ 40 ಮಕ್ಕಳನ್ನು ತುಂಬಿದ್ದಾರೆ. ಟಾಟಾ ಏಸ್‍ನಲ್ಲಿ ಮಕ್ಕಳು ಒಬ್ಬರ ಮೇಲೆ ಒಬ್ಬರು ಕುಳಿತು ಪ್ರಯಾಣ ಮಾಡುತ್ತಿದ್ದಾರೆ.

ದಾವಣಗೆರೆಯ ಅನಗೋಡು ಪಾರ್ಕ್‍ಗೆ ಶಿಕ್ಷಕರು ಪ್ರವಾಸ ಕರೆ ತಂದಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ. ಅಪಘಾತ ವಾದರೆ ಯಾರು ಹೊಣೆ ಎಂದು ಸಾರ್ವಜನರಿಕರು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ ಶಾಲೆಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *