ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ – ಮಕ್ಕಳ ಸಂತೆಯಲ್ಲಿ ಪೊಂಗಲ್ ಘಮಲು!

ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದೇ ಬಿಡ್ತು. ಈ ಹಬ್ಬ ಸುಗ್ಗಿ ಜೊತೆ ಹಿಗ್ಗು ತಂದಿದ್ದು, ನಾಡಿನೆಲ್ಲೆಡೆ ಸಂಭ್ರಮ, ಸಡಗರವನ್ನುಂಟು ಮಾಡಿದೆ. ಅದರಂತೆ ಸಿಲಿಕಾನ್ ಸಿಟಿಯ ಬಹುತೇಕ ಶಾಲೆಗಳಲ್ಲಿ ಸಂಕ್ರಾಂತಿ ಕಲರವ ಮುಗಿಲು ಮುಟ್ಟಿದೆ.

ನಗರದ ನಾಗಸಂದ್ರ ಮುಖ್ಯ ರಸ್ತೆಯಲ್ಲಿರುವ ನಿಸರ್ಗ ಸ್ಕೂಲ್ ನಲ್ಲಿ ರೈತರ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳೆಲ್ಲ ರೈತಾಪಿ ವೇಷಭೂಷಣ ಧರಿಸಿ, ಪಕ್ಕಾ ಹಳ್ಳಿ ಸೊಗಡನ್ನು ಪ್ರದರ್ಶಿಸಿದರು.

ಹುಡುಗರು ಪಂಚೆ ಉಟ್ಟುಕೊಂಡು ಖದರ್ ತೋರಿಸಿದರೆ, ಹುಡುಗಿಯರು ಸೀರೆ ಉಟ್ಟುಕೊಂಡು ಪಕ್ಕಾ ಹಳ್ಳಿ ಹೆಣ್ಣು ಮಕ್ಕಳಾಗಿದ್ದರು. ಚಿಣ್ಣರೆಲ್ಲಾ ಭೂದೇವಿಗೆ ನಮಿಸಿ, ರಾಗಿ, ಭತ್ತ, ಕಡಲೆಕಾಯಿ, ಗೆಣಸು ಅವರೆಕಾಯಿಗಳನ್ನು ರಾಶಿ ಮಾಡಿದರು. ಜೊತೆಗೆ ರೈತರು ಬೆಳೆದ ತರಕಾರಿಗಳನ್ನು ಸ್ವತ: ಮಕ್ಕಳೇ, ತಮ್ಮ ತೊದಲು ನುಡಿಗಳಲ್ಲಿ ಕೂಗಿ, ಕರೆದು ಮಾರಾಟ ಮಾಡಿದರು.

ಸದಾ ಆಫೀಸ್, ಕೆಲಸ ಅಂತಾ ಬ್ಯುಸಿ ಇದ್ದ ಪೋಷಕರಂತೂ ಮಕ್ಕಳ ಸಂಭ್ರಮ, ಬೊಂಬಾಟ್ ಡ್ಯಾನ್ಸ್ ನೋಡಿ ಹಿರಿಹಿರಿ ಹಿಗ್ಗಿದರು. ಜೊತೆಗೆ ನಗರದ ಮಕ್ಕಳಿಗೆ ದೇಶಿ ಸಂಸ್ಕೃತಿ ಪರಿಚಯಿಸಿದ ಶಾಲೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *