ಸಂಕೇಶ್ವರ ಪಟ್ಟಣದ ಇಬ್ಬರು ನ್ಯಾಯಾಧೀಶರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ

ಬೆಳಗಾವಿ/ಚಿಕ್ಕೋಡಿ: ಕನ್ನಡದಲ್ಲಿ ತೀರ್ಪು ನೀಡಿದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಇಬ್ಬರು ನ್ಯಾಯಾಧೀಶರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕನ್ನಡದಲ್ಲಿ ತೀರ್ಪು ನೀಡಿದ 100 ಜನ ನ್ಯಾಯಾಧೀಶರು ಹಾಗೂ ವಾದ ಮಂಡಿಸಿದ ವಕೀಲರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯ್ತು. ಸಂಕೇಶ್ವರ ನಗರದ ಇಬ್ಬರು ನ್ಯಾಯಾಧೀಶರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಕೇಶ್ವರ ನಗರದವರಾದ ಉಡುಪಿ ಜೆಎಂಎಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಹಾಂತೇಶ್ ಗಣಪತಿ ಭೂಸಗೋಳ ಹಾಗೂ ನವಲಗುಂದ ಜೆಎಂಎಫ್‍ಸಿಯ ನ್ಯಾಯಾಲದಲ್ಲಿರುವ ಸುನೀಲ ತಳವಾರ ಇವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Comments

Leave a Reply

Your email address will not be published. Required fields are marked *