ಸ್ವಚ್ಛತಾ ಆಂದೋಲನಕ್ಕೆ ನಟಿ ಶುಭ ಪೂಂಜಾ ಚಾಲನೆ

ಬೆಂಗಳೂರು: ಕರ್ನಾಟಕ-ತಮಿಳುನಾಡಿನ ಗಡಿ ಅತ್ತಿಬೆಲೆಯಲ್ಲಿ ರಾಷ್ಟ್ರೀಯ ಸ್ವಚ್ಛತಾ ಆಂದೋಲನಕ್ಕೆ ಸ್ಯಾಂಡಲ್ ವುಡ್ ನಟಿ ಶುಭ ಪೂಂಜಾ ಇಂದು ಚಾಲನೆ ನೀಡಿದ್ದಾರೆ.

ಸ್ವಚ್ಛತಾ ರಾಯಭಾರಿಯಾಗಿರೋ ನಟಿ ಅತ್ತಿಬೆಲೆ ಪೊಲೀಸರ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ಬಳಿಕ ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ರು.

ಅತ್ತಿಬೆಲೆ ಪುರಸಭೆ ಜಯಕರ್ನಾಟಕ ಸಂಘಟನೆ, ಅತ್ತಿಬೆಲೆ ಪೊಲೀಸ್ ಪುರಸಭೆ ಸದಸ್ಯರು ಹಾಗು ಶಾಲಾ ಮಕ್ಕಳು ಸ್ವಚ್ಛತಾ ಜಾಥಾದಲ್ಲಿ ಭಾಗಿಯಾಗಿದ್ದರು. ನಂತರ ನಟಿ ಶುಭ ಪೂಂಜಾರಿಂದ ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಜಾಥಾ ನಡೆಸಲಾಯಿತು.

Comments

Leave a Reply

Your email address will not be published. Required fields are marked *