ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

– ಪೈರಸಿ, ಕಳ್ಳರಿಗೆ ನಾನು ಹೆದರಲ್ಲ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಹುನೀರಿಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ಕೋಟಿಗೊಬ್ಬ3. ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕುರಿತಾಗಿ ಕಿಚ್ಚ ಕೆಲವು ವಿಚಾರಗಳನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.


ಕೋಟಿಗೊಬ್ಬ 3 ಸಿನಿಮಾ ಸುದೀಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಎರಡು ಸಿನಿಮಾ ರಿಲೀಸ್ ಆಗುತ್ತಿದ್ದು, ಖುಷಿಯಾಗುತ್ತಿದೆ. ಕಥೆ ಇಷ್ಟ ಆಗಿದೆ, ಸಿನಿಮಾ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಹುಚ್ಚ ಸಿನಿಮಾದಿಂದ ಶುರು ಮಾಡಿದರೆ, ಆ ಕಥೆ ಹೇಗೆ ಹೇಳಬೇಕೊ ಹಾಗೇ ಹೇಳಿದ್ದೇವೆ. ಹಾಗೇ ಈ ಕಥೆ ಹೇಗೆ ಹೇಳಬೇಕೊ ಹಾಗೆ ಹೇಳಿದ್ದೇವೆ ಎಂದಿದ್ದಾರೆ.

ವಾಪಾಸು ಒಂದು ಪಯಣ ಶುರುವಾಗಿದೆ. ಕೊರೊನಾ ಸಮಯದಲ್ಲಿ ತುಂಬಾ ಎಫೆಕ್ಟ್ ಆಗಿದೆ. ಎಷ್ಟು ಜನ ಕೆಲಸ ಹೋಗಿದೆ. ಹಾಗಂತ ಕೆಲಸ ಮಾಡದು ನಿಲ್ಲಸಲ್ಲ ಎಂದಿದ್ದಾರೆ. ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

ಅರ್ಜುನ್ ಮ್ಯೂಸಿಕ್ ಚೆನ್ನಾಗಿದೆ. ಹೊರ ದೇಶದ ರೋಡ್‍ಗಳಲ್ಲಿ ಆ್ಯಕ್ಷನ್ ಸಿಕ್ವೇಲ್‍ಗಳು ಚೆನ್ನಾಗಿದೆ. 50-30 ಕಾರುಗಳು ಚೇಸಿಂಗ್ ನೋಡೊಕೆ ಚೆನ್ನಾಗಿತ್ತು. ನನಗೆ ಹೊಸ ಅನುಭವವಾಗಿದೆ. ಪೈರಸಿಗೆ ಹೆದರಲ್ಲ. ಕಳ್ಳರಿಗೆ ನಾನು ಭಯ ಪಡಲ್ಲ. ನನ್ನ ಫ್ಯಾನ್ಸ್ ನಿಂದಲೇ ನಾನು ಇಲ್ಲಿ ಇರೋದು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *