ಮರಾಠಿ ಚಿತ್ರದಲ್ಲಿ ನಟಿಸಲಿದ್ದಾರಾ ಕೆಂಡಸಂಪಿಗೆ ಮಾನ್ವಿತಾ!

ಬೆಂಗಳೂರು: ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕೆಂಡ ಸಂಪಿಗೆ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿಸವರು ಮಾನ್ವಿತಾ ಕಾಮತ್. ಸೂರಿ ಕೈಚಳಕದಲ್ಲಿ ಗೆದ್ದಿದ್ದ ಈ ಚಿತ್ರದ ಮೂಲಕವೇ ಮಾನ್ವಿತಾ ಕೂಡಾ ನಟಿಯಾಗಿ ಗೆದ್ದಿದ್ದಾರೆ. ಎಲ್ಲರೂ ಅಚ್ಚರಿ ಪಡುವಂತೆ ಹಿಟ್ ಚಿತ್ರಗಳಲ್ಲಿಯೇ ನಟಿಸುತ್ತಲೂ ಇದ್ದಾರೆ. ಕನ್ನಡದಲ್ಲಿ ಕೈ ತುಂಬಾ ಅವಕಾಶಗಳನ್ನು ಹೊಂದಿರೋ ಮಾನ್ವಿತಾ ಇದೀಗ ಮರಾಠಿ ಚಿತ್ರರಂಗಕ್ಕೆ ತೆರಳುವ ಸನ್ನಾಹದಲ್ಲಿದ್ದಾರೆ!

ಬೆಂಗಳೂರು ಮೂಲದ ಮರಾಠಿ ಚಿತ್ರ ನಿರ್ದೇಶಕಿ ನಂದಿಯಾ ಯಾದವ್ ತಮ್ಮ ಚಿತ್ರಕ್ಕೆ ನಾಯಕಿಯಾಗಲು ಮಾನ್ವಿತಾರನ್ನು ಸಂಪರ್ಕಿಸಿದ್ದಾರಂತೆ. ಈ ಹಿಂದೆ ಲೈ ಭಾರಿ ಎಂಬ ಸೂಪರ್ ಹಿಟ್ ಚಿತ್ರ ಮಾಡಿದ್ದ ನಂದಿತಾ ಒಂದಷ್ಟು ವಿರಾಮದ ನಂತರ ಮತ್ತೊಂದು ಚಿತ್ರದ ಮೂಲಕ ಮರಳಿದ್ದಾರೆ. ಈ ಚಿತ್ರದ ಕಥೆಯನ್ನು ಮಾನ್ವಿತಾ ಕೂಡಾ ಮೆಚ್ಚಿಕೊಂಡು ನಟಿಸಲೂ ಒಪ್ಪಿಕೊಂಡಿದ್ದಾರಂತೆ.

ನಂದಿತಾ ಆರಂಭ ಕಾಲದಿಂದಲೇ ಮಾನ್ವಿತಾ ಚಿತ್ರಗಳನ್ನು ಗಮನಿಸುತ್ತಾ ಬಂದಿದ್ದಾರಂತೆ. ಮಾನ್ವಿತಾ ನಟಿಸಿದ್ದ ಕೆಂಡಸಂಪಿಗೆ ಮತ್ತು ಟಗರು ಚಿತ್ರಗಳನ್ನೂ ನೋಡಿ ಫಿದಾ ಆಗಿದ್ದಾರಂತೆ. ಟಗರು ಚಿತ್ರದ ಪಾತ್ರವಂತೂ ಅವರನ್ನು ಬಹುವಾಗಿ ಸೆಳೆದುಕೊಂಡಿದೆಯಂತೆ. ಆದ್ದರಿಂದಲೇ ನಂದಿತಾ ತಮ್ಮ ಹೊಸ ಚಿತ್ರಕ್ಕೆ ಮಾನ್ವಿತಾರನ್ನೇ ನಾಯಕಿಯಾಗಿಸಲು ತೀರ್ಮಾನಿಸಿದ್ದಾರೆ.

ಕೆಂಡಸಂಪಿಗೆಯ ಫ್ಲೇವರಿನ ಈ ಮರಾಠಿ ಚಿತ್ರದ ಮೂಲಕ ಮಾನ್ವಿತಾ ಪರ ಭಾಷೆಗೂ ಎಂಟ್ರಿ ಕೊಡಲಿರೋದು ಪಕ್ಕಾ ಆದಂತಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *