ಸ್ನಾಯು ದೌರ್ಬಲ್ಯದಿಂದ ಬಳಲುತ್ತಿರೋ ಬಾಲಕನ ಕನಸನ್ನ ಈಡೇರಿಸಿದ್ರು ಕಿಚ್ಚ ಸುದೀಪ್

ಬೆಂಗಳೂರು: ನೆಚ್ಚಿನ ನಟರುಗಳನ್ನ ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆಯಾಗಿರುತ್ತದೆ. ಅದೇ ರೀತಿ ಇಲ್ಲೊಬ್ಬ ಬಾಲಕನಿಗೆ ತನ್ನ ನೆಚ್ಚಿನ ಕಿಚ್ಚ ಸುದೀಪ್ ಅವರನ್ನು ನೋಡಬೇಕು, ಅವರ ಜೊತೆ ಮಾತನಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದಾನೆ.

ಅಭಿಷೇಕ್ ಸುದೀಪ್ ರನ್ನ ನೋಡಬೇಕು ಅನ್ನೋ ಕನಸು ಕಂಡಿದ್ದನು. ಶನಿವಾರ ಆ ಬಾಲಕನ ಕನಸನ್ನ ಕಿಚ್ಚ ಈಡೇರಿಸಿದ್ದಾರೆ. ಅಭಿಷೇಕ್ ಸ್ನಾಯು ದೌರ್ಬಲ್ಯದಿಂದ ಬಳಲುತ್ತಿದ್ದಾನೆ. ಆದ್ದರಿಂದ ಸುದೀಪ್ ಅವರನ್ನು ಭೇಟಿಯಾದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲ ಹೆಚ್ಚಿಸಿಕೊಳ್ಳಬಹುದು ಎಂಬ ವಿಶ್ವಾಸವನ್ನು ಬಾಲಕ ಹೊಂದಿದ್ದನು.

ಈ ಬಾಲಕನ ಬಗ್ಗೆ ಸುದೀಪ್ ತಿಳಿದುಕೊಂಡು ಕೊನೆಗೂ ಆತನ ಆಸೆಯನ್ನು ಈಡೇರಿಸಿದ್ದಾರೆ. ಸುದೀಪ್ ಅವರು ಅಭಿಷೇಕ್ ನನ್ನ ತಮ್ಮ ಮನೆಗೆ ಕರೆಸಿಕೊಂಡು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಜೊತೆ ಆ ಬಾಲಕನನ್ನು ಎತ್ತಿಕೊಂಡು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಇದರಿಂದ ಬಾಲಕ ಸಂತಸ ಪಟ್ಟಿದ್ದಾನೆ.

Comments

Leave a Reply

Your email address will not be published. Required fields are marked *