ಕೆಟಿಆರ್ ಚಾಲೆಂಜ್ ಸ್ವೀಕರಿಸಿದ ಸಚಿನ್, ಲಕ್ಷ್ಮಣ್

ಮುಂಬೈ: ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡಲ್ಕೂರ್ ಮತ್ತು ವಿ.ವಿ.ಎಸ್.ಲಕ್ಮಣ್ ಇಬ್ಬರು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ನೀಡಿದ್ದ #HarithaHaram ಚಾಲೆಂಜ್ ಸ್ವೀಕರಿಸಿದ್ದಾರೆ. ಸಚಿನ್ ಮತ್ತು ಲಕ್ಷ್ಮಣ್ ತಮ್ಮ ಮನೆ ಅಂಗಳದಲ್ಲಿ ಮೂರು ಸಸಿಗಳನ್ನು ಹಚ್ಚುವ ಮೂಲಕ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಈ ಚಾಲೆಂಜ್ ಮೂಲಕ ನಮ್ಮ ರಾಜ್ಯವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡೋಣ ಎಂಬ ಸಂದೇಶವನ್ನು ನೀಡಿದ್ದಾರೆ.

ಕೆಟಿ ರಾಮಾರಾವ್ ಚಾಲೆಂಜ್ ನೀಡಿದ 24 ಗಂಟೆಯಲ್ಲಿ ಸಚಿನ್ ಪೂರ್ಣ ಮಾಡಿ, ಟ್ವಿಟ್ಟರ್ ನಲ್ಲಿ ಮೂರು ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಇತ್ತ ಲಕ್ಷ್ಮಣ್ ಸಹ ತಮ್ಮ ಟ್ವಿಟ್ಟರ್ ನಲ್ಲಿ ಮೂರು ಫೋಟೋಗಳನ್ನು ಹಾಕಿಕೊಂಡು, ನಾನು ಕೆಟಿಆರ್ ಚಾಲೆಂಜ್ ಪೂರ್ಣ ಮಾಡಿದ್ದೇನೆ. ನನ್ನ ಮನೆಯಂಗಳದ ತೋಟದಲ್ಲಿ ದಾಳಿಂಬೆ, ನೀರ್ ಸೇಬು ಮತ್ತು ಲಕ್ಷ್ಮಣ ಹಣ್ಣಿನ ಸಸಿಗಳನ್ನು ಹಚ್ಚಿದ್ದೇನೆ. ಈ ಚಾಲೆಂಜ್ ನ್ನು ನಾನು ವೀರೇಂದ್ರ ಸೆಹ್ವಾಗ್, ಮಿಥಾಲಿ ರಾಜ್, ಪಿ.ವಿ.ಸಿಂಧು ಅವರಿಗೆ ವರ್ಗಾವಣೆ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಕೆ.ಟಿ.ರಾಮರಾವ್ ಅವರಿಗೆ ಈ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಚಾಲೆಂಜ್ ನೀಡಿದ್ದರು. ಚಾಲೆಂಜ್ ಸ್ವೀಕರಿಸಿದ್ದ ಕೆಟಿಆರ್ ಸಹ ಮೂರು ಸಸಿಗಳನ್ನು ನಾಟಿ ಮಾಡಿದ್ದರು. ರಾಜಮೌಳಿ ಅವರಿಗೆ ನಿಜಾಮಾಬಾದ್ ಸಂಸದೆಯಾಗಿರುವ ಕವಿತಾ ರಾವ್ #ಹರಿತಾಹರಮ್ ಚಾಲೆಂಜ್ ನೀಡಿದ್ದರು. ಈ ಚಾಲೆಂಜ್ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡುವ ಮೂಲಕ ನಮ್ಮ ಪರಿಸರವನ್ನು ಹಸಿರಾಗಿಸೋಣ ಎಂಬ ಉದ್ದೇಶದಿಂದ ಆರಂಭಿಸಲಾಗಿದೆ.

ಈ ಹಿಂದೆ ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22 ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಟ್ವೀಟ್ ಮಾಡಿದ್ದರು. ಈ ಚಾಲೆಂಜ್ ಎರಡು ತಿಂಗಳ ಹಿಂದೆ ಟ್ರೆಂಡ್ ಆಗಿತ್ತು. ಎಲ್ಲ ಸೆಲೆಬ್ರಟಿಗಳು ಚಾಲೆಂಜ್ ಸ್ವೀಕರಿಸುವ ಮೂಲಕ ತಮ್ಮ ಆಪ್ತರಿಗೆ ಟ್ಯಾಗ್ ಮಾಡುತ್ತಿದ್ದರು.

Comments

Leave a Reply

Your email address will not be published. Required fields are marked *