ಪಂಚಾಯ್ತಿಯತ್ತ ಸುಳಿಯದ ಪಿಡಿಓಗಾಗಿ ಗ್ರಾಮಸ್ಥರಿಂದ ಹುಡುಕಾಟ!

ಕಲಬುರಗಿ: ಜಿಲ್ಲೆಯ ಸೇಂಡ ತಾಲೂಕಿನ ರಂಜೋಳ ಗ್ರಾಮದ ಗ್ರಾಮಸ್ಥರು ಪಂಚಾಯ್ತಿ ಕಡೆಗೆ ಸುಳಿಯದ ಪಿಡಿಓಗಾಗಿ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ.

ರಂಜೋಳ ಗ್ರಾಮ ಪಂಚಾಯ್ತಿ ಪಿಡಿಓ ವಿದ್ಯಾಶ್ರೀಯವರು ಹಲವು ತಿಂಗಳುಗಳಿಂದ ಗ್ರಾಮದತ್ತ ಸುಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಿಡಿಓ ನಾಪತ್ತೆಯಾಗಿದ್ದರೆಂದು ಭಿತ್ತಿ ಪತ್ರ ಹಂಚಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಪಿಡಿಓ ನಾಪತ್ತೆಯಾಗಿದ್ದಾರೆಂದು ಭಿತ್ತಿ ಪತ್ರ ಸಿದ್ಧಪಡಿಸಿ ರಂಜೋಳ ಗ್ರಾಮ ಪಂಚಾಯ್ತಿ ಸೇರಿದಂತೆ, ಸೇಡಂ ತಾಲೂಕು ಪಂಚಾಯ್ತಿ ಹಾಗೂ ಹಲವು ಕಡೆ ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್ ನಲ್ಲಿ ರಂಜೋಳ ಗ್ರಾಮ ಗಬ್ಬೆದ್ದು ಹೋದರು ಪಿಡಿಓ ನಾಪತ್ತೆ ಎಂದು ನಮೂದು ಮಾಡಿದ್ದಾರೆ. ಅಲ್ಲದೇ ಪಿಡಿಓ ಅವರನ್ನು ಎಲ್ಲಾದ್ರೂ ಕಂಡರೆ ರಂಜೋಳ ಗ್ರಾಮಸ್ಥರಿಗೆ, ಇಲ್ಲವೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ ಎಂದು ತಮ್ಮ ಆಕ್ರೊಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *