ದುಂದುವೆಚ್ಚಕ್ಕೆ ಕಡಿವಾಣ ಹಾಕ್ತೀನಿ ಅಂದಿದ್ದ ಸಿಎಂ ಪ್ರಮಾಣವಚನಕ್ಕೆ ಖರ್ಚಾಗಿರೋದು ಬರೋಬ್ಬರಿ 42ಲಕ್ಷ ರೂ.!

ಬೆಂಗಳೂರು: ದುಂದು ವೆಚ್ಚಕ್ಕೆ ಕಡಿವಾಣ ಹಾಕ್ತೀನಿ ಅಂತ ಹೇಳಿದ್ದ ಸಿಎಂ ಕುಮಾರಸ್ವಾಮಿ ಪ್ರಮಾಣ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ಮೋದಿ ವಿರುದ್ಧ ಶಕ್ತಿ ಪ್ರದರ್ಶನಕ್ಕಾಗಿ ನಡೆದ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರೋಬ್ಬರಿ 42 ಲಕ್ಷ ರೂ. ಖರ್ಚಾಗಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

ಮೇ 23 ರಂದು ವಿಧಾನಸೌಧ ಮುಂಭಾಗ ನಡೆದಿದ್ದ ಕೇವಲ ಐದು ನಿಮಿಷ ಕಾರ್ಯಕ್ರಮಕ್ಕಾಗಿ ಖರ್ಚಾಗಿದ್ದು 42,89,940 ರೂಪಾಯಿಯಂತೆ. ಅದರಲ್ಲಿ ಕೇವಲ ಹೂಗುಚ್ಛಕ್ಕಾಗಿ 65,100 ರೂಪಾಯಿ ಖರ್ಚಾಗಿರುವುದಾಗಿ ತಿಳಿದುಬಂದಿದೆ.

ಪ್ರಮಾಣ ವಚನಕಾರ್ಯಕ್ರಮದಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಯಾವತಿ ಭಾಗಿಯಾಗಿದ್ರು. ಇವರೆಲ್ಲರ ಖರ್ಚು ವೆಚ್ಚವೂ ಸೇರಿ ಒಟ್ಟು 42,89,940 ರೂಪಾಯಿ ವ್ಯಯವಾಗಿದೆ. ಆದ್ರೆ ಈ ಖರ್ಚಿನಲ್ಲಿ ಊಟ ತಿಂಡಿಗೆ ಆದ ವೆಚ್ಚವನ್ನ ಸೇರಿಸಿಲ್ಲ. ಹೀಗಾಗಿ ಊಟ ತಿಂಡಿ ವೆಚ್ಚ ಸಪರೇಟ್ ಇದೆ ಅಂತ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿಪಾಟೀಲ್ ಆರ್ ಟಿಐ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ.

ಒಟ್ಟಿನಲ್ಲಿ ದುಂದುವೆಚ್ಚ ಮಾಡಲ್ಲ ಅಂದಿದ್ದ ಸಿಎಂ ಕುಮಾರಸ್ವಾಮಿ ಸ್ವಂತ ದುಡ್ಡನ್ನ ಭರಿಸಲಿ. ಈ ಹಣದಲ್ಲಿ ರೈತರ ಸಾಲಮನ್ನಾ ಮಾಡಲಿ ಎಂದು ಮರಿಲಿಂಗೇಗೌಡ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *