ಟೀ ಮಾರಿಕೊಂಡು ಜೀವನ ನಡೆಸ್ತಿದ್ದ ಯುವಕನಿಗೆ ಚಾಕು ಇರಿತ..!

ಬೆಂಗಳೂರು: ಪುಡಿ ರೌಡಿಗಳಿಬ್ಬರು ರಸ್ತೆ ಬದಿಯಲ್ಲಿ ರಾತ್ರಿ ವೇಳೆ ಟೀ ಮಾರುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಅನಂತನಗರ ಗೇಟ್ ಬಳಿ ನಡೆದಿದೆ.

ಚಾಕು ಇರಿತಕ್ಕೊಳಗಾದ ಯುವಕನನ್ನು ಶಿವಕುಮಾರ್(25) ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ಪುಡಿ ರೌಡಿಗಳನ್ನು ಪ್ರಜ್ವಲ್ ಅಲಿಯಾಸ್ ಕೊತ್ವಾಲ್ ಹಾಗೂ ಮನೋಜ್ ಗೌಡ ಅಲಿಯಾಸ್ ಬಾಂಡ್ಲಿ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ತಿಂಗಳು 28 ರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಿವಕುಮಾರ್ ಹೊಟ್ಟೆ ಪಾಡಿಗಾಗಿ ದೂರದ ತುಮಕೂರಿನಿಂದ ಬಂದು ರಸ್ತೆ ಬದಿ ರಾತ್ರಿ ವೇಳೆ ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದನು. ಆದರೆ 28 ರಂದು ಪ್ರಜ್ವಲ್ ಹಾಗೂ ಮನೋಜ್ ಹಣ ನೀಡದೆ ಸಿಗರೇಟ್ ನೀಡುವಂತೆ ಕೇಳಿದ್ದಾರೆ. ಆಗ ಶಿವಕುಮಾರ್ ಅವರಿಗೆ ಸಿಗರೇಟ್ ನೀಡಲಿಲ್ಲ. ಇದರಿಂದ ಕೋಪಕೊಂಡು ಚಾಕುವಿನಿಂದ ಭುಜಕ್ಕೆ ಚುಚ್ಚಿ ಗಾಯಗೊಳಿಸಿ ಪ್ರಜ್ವಲ್ ಹಾಗೂ ಮನೋಜ್ ಪರಾರಿಯಾಗಿದ್ದಾರೆ. ಬಳಿಕ ಗಾಯಗೊಂಡಿದ್ದ ಶಿವಕುಮಾರ್ ನನ್ನು ಸ್ಥಳದಲ್ಲಿದ್ದವರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹಲ್ಲೆ ನಡೆಸಿ ಚಾಕು ಇರಿದಿರುವ ದೃಶ್ಯ ಹತ್ತಿರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗೆದೆ.

ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಷ್ಟು ದಿನವಾದರೂ ಆರೋಪಿಗಳ ಬಂಧಿಸಿಲ್ಲದೆ ಇರುವುದು ಆರೋಪಿಗಳಿಗೆ ಭಯವಿಲ್ಲದಂತಾಗಿದೆ. ಆರೋಪಿಗಳು ಈ ಹಿಂದೆ ಹಲವು ಬಾರಿ ಕಳ್ಳತನಗಳಲ್ಲಿ ಭಾಗಿಯಾಗಿದ್ದು, ಪ್ರಕರಣಗಳು ಕೂಡ ದಾಖಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *