ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

ಬೀದರ್: ರಸ್ತೆ ಮಧ್ಯೆ ಬಸ್ ಕೆಟ್ಟು ನಿಂತ ಪರಿಣಾಮ 37 ಮಂದಿ ಕನ್ನಡಿಗರು ತಡವಾಗಿ ರೊಮೆನಿಯಾ ತಲಪಲಿದ್ದಾರೆ.

ಉಕ್ರೇನ್‍ನಿಂದ ಹೊರಟಿದ್ದ ಬಸ್ ರೊಮೆನಿಯಾ ಗಡಿಯಿಂದ 100 ಕಿ.ಮೀ ದೂರದಲ್ಲಿ ಹಾಳಾಗಿತ್ತು. ಕೆಟ್ಟು ನಿಂತಿದ್ದ ಬಸ್ ರಿಪೇರಿಯಾಗಿದ್ದು ಮತ್ತೆ ರೊಮೆನಿಯಾ ಕಡೆಗೆ ಕನ್ನಡಿಗರು ಪ್ರಯಾಣ ಹೊರಟಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ದೇಶವಾಗಿ ಉಳಿಯುವುದೇ ಅನುಮಾನ: ಪುಟಿನ್‌ ನೇರ ಎಚ್ಚರಿಕೆ

ಬೀದರ್ ಮೂಲದ ಶಶಾಂಕ್ ಮತ್ತು ವಿವೇಕ್ ಸೇರಿದಂತೆ 37 ಕನ್ನಡಿಗರು ಒಂದೇ ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಉಳಿದ ನಾಲ್ಕು ಬಸ್‍ಗಳು ಈಗಾಗಲೇ ರೊಮೆನಿಯಾ ತಲುಪಿದ್ದು ಕನ್ನಡಿಗರು ಕೆಲವೇ ಗಂಟೆಯಲ್ಲಿ ರೊಮೆನಿಯಾ ತಲುಪುವ ಸಾಧ್ಯತೆಯಿದೆ. ಇದನ್ನೂ ಓದಿ: ಉಕ್ರೇನ್‍ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸೀಟ್ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸಲಿ: ದಿಗ್ವಿಜಯ್ ಸಿಂಗ್

ಖಾರ್ಕಿವ್‍ನ ಪಿಶಾಚಿನ್‍ನಿಂದನಿಂದ ಸತತ 40 ಗಂಟೆಗಳ ಕಾಲ ವಿದ್ಯಾರ್ಥಿಗಳು ಪ್ರಯಾಣ ಮಾಡಿ ರೊಮೆನಿಯಾ ತಲುಪಲಿದ್ದಾರೆ.

Comments

Leave a Reply

Your email address will not be published. Required fields are marked *