ಪ್ರಚಾರದ ವೇಳೆ ಭಾರೀ ಅವಘಡದಿಂದ ಪಾರಾದ ರಾಕಿಂಗ್ ಸ್ಟಾರ್!

ಬೆಂಗಳೂರು: ರಾಜ್ಯಾದ್ಯಂತ ತಮ್ಮ ಇಷ್ಟದ ಅಭ್ಯರ್ಥಿ ಪರ ನಟ ಯಶ್ ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಪ್ರಚಾರ ಮಾಡುವ ವೇಳೆ ನಡೆದ ಒಂದು ಅವಘಡದಿಂದಾಗಿ ಯಶ್ ಅದೃಷ್ಟವಶಾತ್ ಪಾರಾಗಿದ್ದಾರೆ.

ತಾರೆಯರು ಪ್ರಚಾರಕ್ಕೆ ಬರುತ್ತಾರೆ ಎಂದರೆ ಭಾರೀ ಜನ ಸೇರ್ತಾರೆ. ತಮ್ಮ ನೆಚ್ಚಿನ ನಟನನ್ನ ನೋಡೋಕೆ ಸಿಗೋ ಅವಕಾಶವನ್ನ ಉಯೋಗಿಸಿಕೊಳ್ತಾರೆ. ಈ ವೇಳೆ ಆಗದವವರು ಆಗುವವರು ಯಾರು ಅನ್ನೋದು ಅಲ್ಲಿನ ಜನರ ಮಧ್ಯೆ ಗೊತ್ತಾಗಲ್ಲ. ಹೀಗೆ ಜನರ ಗುಂಪಿನಲ್ಲೇ ಇದ್ದ ಒಬ್ಬ ಕಿಡಿಗೇಡಿಯಿಂದ ಯಶ್ ಅವಘಡಕ್ಕೆ ಈಡಾಗುವ ಸಂದರ್ಭ ರಾಯಚೂರಿನ ಲಿಂಗಸೂರಿನಲ್ಲಿ ನಡೆದಿತ್ತು.

ಲಿಂಗಸೂರಿನಲ್ಲಿ ಯಶ್ ಬಿಜೆಪಿ ಅಭ್ಯರ್ಥಿ ಮಾದಪ್ಪ ವಜ್ಜಲ್ ಪರ ಪ್ರಚಾರ ನಡೆಸುವ ವೇಳೆ ಕಿಡಿಗೇಡಿಯೊಬ್ಬ ಯಶ್ ನಿಂತಿರುವ ಕ್ಯಾಂಟರ್‍ಗೆ ಮಾದಪ್ಪ ವಜ್ಜಲ್ ಮೇಲೆ ಕಲ್ಲೆಸಿದಿದ್ದಾರೆ. ಕೊಂಚ ಗುರಿ ತಪ್ಪಿದರೂ ಯಶ್ ಮೇಲೆ ಆ ಕಲ್ಲು ಬೀಳುತ್ತಿತ್ತು. ಆದರೆ ಯಶ್ ಆ ದುರಂತದಿಂದ ಪಾರಾದರು.

ತಾರೆಗಳು ರೋಡ್ ಶೋಗೆ ಬರುವ ವೇಳೆ ಇಂಥಹ ಪರಿಸ್ಥಿತಿ ಅನೇಕ ಬಾರಿ ಎದುರಾಗಿದ್ದಿದೆ. ಗೋಕಾಕ್ ಚಳುವಳಿ ವೇಳೆ ಕರೆಂಟ್ ಟ್ರಾಸ್ಸ್‍ಮಿಷನ್ ಲೈನ್ ರಾಜ್‍ಕುಮಾರ್‍ಗೆ ತಗುಲುವ ಸಂದರ್ಭವಿತ್ತು. ಅಭಿಮಾನಿಯೋರ್ವರ ಸಮಯಪ್ರಜ್ಞೆಯಿಂದಾಗಿ ರಾಜ್‍ಕುಮಾರ್ ಬಚಾವಾಗಿದ್ದರು. ಇದೀಗ ಯಶ್ ಕೂಡ ಅಂಥದ್ದೇ ಒಂದು ದೊಡ್ಡ ದುರಂತದಿಂದ ಬಚಾವಾಗಿದ್ದಾರೆ.

Comments

Leave a Reply

Your email address will not be published. Required fields are marked *