ನಂದಿಗಿರಿಧಾಮದಲ್ಲಿ 10 ಲಕ್ಷ ರೂ. ದರೋಡೆ

ಚಿಕ್ಕಬಳ್ಳಾಪುರ: ವಾಹನ ಅಡ್ಡಗಟ್ಟಿ 10 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಬಳಿ ನಡೆದಿದೆ.

ನಂದಿಬೆಟ್ಟದ ತಪ್ಪಲಿನ ಕಣಿವೆ ಬಸವಣ್ಣ ದೇವಾಲಯದ ತಿರುವಿನಲ್ಲಿ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ದೊಡ್ಡಬಳ್ಳಾಪುರ ನಿವಾಸಿ ರಾಮಚಂದ್ರ ಸಾಹು ಹಣ ಕಳೆದುಕೊಂಡವರಾಗಿದ್ದಾರೆ.

ಐಟಿಸಿ ಕಂಪನಿಯ ರಾಮಚಂದ್ರ ಸಾಹು ಅವರು ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವಾಗ ವಾಹನ ಅಡ್ಡಗಟ್ಟಿ ಪೆಪ್ಪರ್ ಸ್ಪ್ರೈ ಸಿಂಪಡಿಸಿ ಹಣ ದೋಚಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *