ಯೋಧ ವಿಜಯಾನಂದ ನಾಯ್ಕ ಮನೆಗೆ ಆರ್ ವಿ ದೇಶಪಾಂಡೆ ಭೇಟಿ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಹುತಾತ್ಮ ಯೋಧ ವಿಜಯಾನಂದ ನಾಯ್ಕ ಮನೆಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಇಂದು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು.

ಕಳೆದ ಆರು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಬಿಎಸ್‍ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾನಂದ ಅವರು, ಕಳೆದ ತಿಂಗಳು ಛತ್ತೀಸಗಡದಲ್ಲಿ ನಕ್ಸಲ್ ಕಾರ್ಯಾಚರಣೆ ವೇಳೆ ನೆಲಬಾಂಬ್ ದಾಳಿಗೆ ಸಿಕ್ಕು ವೀರ ಮರಣವನ್ನಪ್ಪಿದ್ದರು. ಇಂದು ಆರ್ ವಿ ದೇಶಪಾಂಡೆ ನಗರದ ಕುಮಾರ ಪಂಥವಾಡಾದಲ್ಲಿರುವ ವಿಜಯಾನಂದರವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದಲ್ಲದೇ, ಮನೆಯವರ ಯೋಗಕ್ಷೇಮ ವಿಚಾರಿಸಿದರು.

ಈ ವೇಳೆ ತಮ್ಮ ಎರಡನೇ ಮಗನಿಗೆ ಸರ್ಕಾರಿ ಉದ್ಯೋಗ ಹಾಗೂ ನಗರದ ರಾಕ್ ಗಾರ್ಡನ್ ಅಥವಾ ವಾರ್ ಶಿಪ್ ಮ್ಯೂಸಿಯಂ ಬಳಿ ಯೋಧ ವಿಜಯಾನಂದನರ ಪುತ್ಥಳಿಯನ್ನು ನಿರ್ಮಿಸುವಂತೆ ಕುಟುಂಬಸ್ಥರು ಸಚಿವ ದೇಶಪಾಂಡೆ ಬಳಿ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *