ಸ್ಕ್ಯಾನಿಂಗ್ ಮಾಡಿಸಲು ಸಂಬಂಧಿಕರು ರೋಗಿಯನ್ನ ಹೊತ್ತುಕೊಂಡೇ ಹೋದ್ರು!

ಕೊಪ್ಪಳ: ಸ್ಟ್ರೆಚರ್ ಇಲ್ಲದ್ದರಿಂದ ಚಿಕಿತ್ಸೆಗಾಗಿ ರೋಗಿಯನ್ನು ಸಂಬಂಧಿಕರೇ ಹೊತ್ತೊಯ್ದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿ ದೊರಸ್ವಾಮಿಯನ್ನು ಅವರ ಸಂಬಂಧಿಕರು ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಗೂಗಿಬಂಡಿ ಗ್ರಾಮದ ದೊರೆಸ್ವಾಮಿಯನ್ನು ಚಿಕಿತ್ಸೆಗಾಗಿ ಗುರುವಾರ ಸಂಜೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರ ಸಲಹೆಯಂತೆ ದೊರೆಸ್ವಾಮಿಗೆ ಸ್ಕ್ಯಾನಿಂಗ್ ಮಾಡಿಸುವ ಸಲುವಾಗಿ ಎರಡನೇ ಮಹಡಿಯಿಂದ ಕೆಳಗೆ ಹೊತ್ತುಕೊಂಡು ಬರಲಾಗಿದೆ. ಸ್ಕ್ಯಾನಿಂಗ್ ಮಾಡಲು ಕರೆದೊಯ್ಯಲು ಸ್ಟ್ರೆಚರ್ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ರೋಗಿ ಸಂಬಂಧಿಕರು ಮನವಿ ಮಾಡಿದ್ದಾರೆ. ಸುಮಾರು 1 ಗಂಟೆಯಾದರೂ ಸ್ಟ್ರೆಚರ್ ನೀಡದ ಹಿನ್ನಲೆಯಲ್ಲಿ ರೋಗಿಯ ಸಂಬಂಧಿಕರೇ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.

Comments

Leave a Reply

Your email address will not be published. Required fields are marked *