ಯಶ್ ನಂತ್ರ ಧ್ರುವ ಸರ್ಜಾಗೆ ಖಡಕ್ ಸೂಚನೆ ಕೊಟ್ಟ ಅಂಬಿ

ಬೆಂಗಳೂರು: ರಾಕಿಂಗ್ ಸ್ಟಾರ್ ನಂತರ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ರೆಬಲ್ ಸ್ಟಾರ್ ಅಂಬರೀಶ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ರೆಬಲ್‍ಸ್ಟಾರ್ ಅಂಬರೀಷ್ ಸ್ಯಾಂಡಲ್ ವುಡ್ ನ ಸೀನಿಯರ್ ಆಗಿರುವುದರಿಂದ ಯಂಗ್ ಜನರೇಷನ್ ಕಲಾವಿದರಿಗೆ ಸಜೆಸ್ಟ್ ಮಾಡುವ ಹಕ್ಕು ಅವರಿಗಿದೆ. ಹಾಗಂತ ಅಂಬಿ ಎಲ್ಲರಿಗೂ ಹೇಳುತ್ತಾ ಕೂರೋದಿಲ್ಲ. ತನ್ನ ಮಾತನ್ನ ಕೇಳುವ ಕಲಾವಿದರಿಗೆ ಮಾತ್ರ ಸಲಹೆ ಸೂಚನೆಗಳನ್ನ ಕೊಡುತ್ತಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ರೆಬಲ್ ಸ್ಟಾರ್!

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡು ಆಮೇಲೆ ನನ್ನ ಭೇಟಿ ಮಾಡುವಂತೆ ತಿಳಿಸಿದ್ದರು. ಇನ್ನೂ ಮಗ ಅಭಿಷೇಕ್ ಗೂ ಕೂಡ ಸಿನಿಮಾ ಮುಹೂರ್ತ ದಿನದಂದು ಎಚ್ಚರಿಕೆ ಕೊಟ್ಟಿದ್ದರು. ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ವಾರ್ನ್ ಮಾಡಿದ್ದಾರೆ.

ಹೌದು, ಅಂಬರೀಷ್ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಧ್ರುವ ಅಂಬರೀಷ್ ಮನೆಗೆ ಹೋಗಿದ್ದರು. ಈ ವೇಳೆ ಅಂಬಿಗೆ ವಿಶ್ ಮಾಡಿ ಸ್ವಲ್ಪ ಹೊತ್ತು ಅವರ ಜೊತೆ ಸಮಯ ಕಳೆದಿದ್ದಾರೆ. ಇದೇ ವೇಳೆಯಲ್ಲಿ ಧ್ರುವಾಗೆ ಅಂಬರೀಶ್ ಖಡಕ್ ಸೂಚನೆ ಕೊಟ್ಟಿದ್ದಾರೆ. ಧ್ರುವ ಸರ್ಜಾ ಒಂದು ಸಿನಿಮಾಗೆ ಕಮಿಟ್ ಆದ ಮೇಲೆ ಮತ್ತೊಂದು ಸಿನಿಮಾಗೆ ಕೈಹಾಕಲ್ಲ. ಆದ್ದರಿಂದ ಎರಡು ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿಕೊಂಡು ಕೂರಬೇಡಿ, ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡೋದನ್ನ ಕಲಿ ಅಂತ ಅಂಬಿ ತಮ್ಮ ಸ್ಟೈಲ್ ನಲ್ಲೇ ಧ್ರುವಾಗೆ ತಿಳಿ ಹೇಳಿದ್ದಾರೆ.

ಅಂಬಿ ಮಾತು ಕೇಳಿ ಅರೆಕ್ಷಣ ಶಾಕ್ ಆದ ಧ್ರುವ ಇನ್ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡಲು ನಿರ್ಧಾರ ಮಾಡಿದ್ದಾರಂತೆ. ಸದ್ಯಕ್ಕೆ ಪೊಗರು ಸಿನಿಮಾದಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಅದ್ದೂರಿ, ಬಹದ್ದೂರ್, ಭರ್ಜರಿ ಸಿನಿಮಾದಂತೆ ಪೊಗರು ಕೂಡ ಭರ್ಜರಿಯಾಗಿ ರೆಡಿಯಾಗುತ್ತಿದೆ.

Comments

Leave a Reply

Your email address will not be published. Required fields are marked *