ರತ್ನಪ್ರಭಾರ ಸೇವೆ ರಾಜ್ಯಕ್ಕೆ ಸಾಕು- ಕೇಂದ್ರಕ್ಕೆ ಪತ್ರ ಬರೆದ ಹೆಚ್‍ಡಿಕೆ

ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ರತ್ನಪ್ರಭಾರ ಸೇವೆ ಶನಿವಾರ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ರತ್ನಪ್ರಭಾರ ಸೇವೆ ರಾಜ್ಯಕ್ಕೆ ಸಾಕು ಎಂದು ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ಅಧಿಕಾರ ವಹಿಸಿಕೊಂಡು ರತ್ನಪ್ರಭಾ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಹೀಗಾಗಿಯೇ ರತ್ನಪ್ರಭಾ ಸಿದ್ದರಾಮಯ್ಯರಿಗೂ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ರತ್ನಪ್ರಭಾ ಸಿಎಸ್ ಸೇವೆಯಲ್ಲಿ ಮುಂದುವರಿಯಬಾರದು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪುತ್ರ ಕುಮಾರಸ್ವಾಮಿ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

ಈ ಹಿಂದೆ ಇದೇ ಮುಖ್ಯಮಂತ್ರಿಗಳು ಸಮರ್ಥ ಅಧಿಕಾರಿ ಎಂದು 3 ತಿಂಗಳ ಅವಧಿ ವಿಸ್ತರಣೆ ಕೋರಿ ಪತ್ರ ಬರೆದಿದ್ದರು. ಆದರೆ ತಂದೆ ಹಾಗು ಪಕ್ಷದ ವರಿಷ್ಠರಾದ ದೇವೇಗೌಡರ ಸೂಚನೆಯ ಮೇರೆಗೆ ಸಿಎಂ ತಮ್ಮ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *