ಅಧಿಕಾರಿಗಳ ಎಡವಟ್ಟು – ಬಡ ಕುಟುಂಬಗಳ ರೇಷನ್ ಕಾರ್ಡ್ ರದ್ದು

sri ranga pattana

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕು ಕಚೇರಿಯ ಅಧಿಕಾರಿಗಳ ಎಡವಟ್ಟಿನಿಂದ ಬಡಕುಟುಂಬಗಳು ಹೈರಾಣಾಗುವ ಸ್ಥಿತಿಗೆ ತಲುಪಿದೆ. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಐವರ ಡೆತ್ ಸೀಕ್ರೆಟ್ – ‘ಹಾಳಾಗ್ ಹೋಗ್ರಿ’ ಅಂದಿದ್ದಕ್ಕೇ ಆತ್ಮಹತ್ಯೆನಾ..?

sri ranga pattana

ಅಧಿಕಾರಿಗಳು ಆದಾಯ ಪ್ರಮಾಣ ಪತ್ರದಲ್ಲಿ ಒಂದು ಸೊನ್ನೆಯನ್ನು ಹೆಚ್ಚಾಗಿ ಸೇರಿಸಿರುವ ಪರಿಣಾಮ ಸುಮಾರು 20ಕ್ಕೂ ಅಧಿಕ ಬಡಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಿದೆ. ಉದಾಹರಣೆಗೆ 20 ಸಾವಿರ ಆದಾಯ ಇರುವುದಕ್ಕೆ ಒಂದು ಸೊನ್ನೆ ಜಾಸ್ತಿ ಮಾಡಿರುವ ಕಾರಣ ಆದಾಯ 2 ಲಕ್ಷ ರೂಪಾಯಿಯಾಗಿದೆ. ಹೀಗಾಗಿ ಆದಾಯ ಹೆಚ್ಚಿದೆ ಎಂಬ ಕಾರಣಕ್ಕೆ ಸರ್ಕಾರ ಏಕಾಏಕಿ ಇವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಇದನ್ನೂ ಓದಿ: ಲಸಿಕೆ ಪಡೆದವರಿಗೆ ನವೆಂಬರ್‌ನಿಂದ ಅಮೆರಿಕಾ ಪ್ರಯಾಣಕ್ಕೆ ಅವಕಾಶ

sri ranga pattana

ಈ ಕುಟುಂಬಗಳು ಕೂಲಿ ಕೆಲಸ, ಆಟೋ ಓಡಿಸಿಕೊಂಡು ಜೀವನ ಮಾಡುವ ಸ್ಥಿತಿಯಲ್ಲಿ ಇದ್ದಾರೆ. ಇವರ ಬಿಪಿಎಲ್ ಕಾರ್ಡ್ ರದ್ದಾಗಿರುವ ಕಾರಣ ಇವರಿಗೆ ಸರ್ಕಾರದಿಂದ ಸಿಗಬೇಕಿದ್ದ ಅಕ್ಕಿ ಸಿಗುತ್ತಿಲ್ಲ. ಇದಲ್ಲದೇ ಆಯುಷ್ಮಾನ್ ಕಾರ್ಡ್ ಕೂಡ ರದ್ದಾಗಿದ್ದು, ಇದರಿಂದ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಲು ಹಣವಿಲ್ಲದೇ ಪರಿತಪಿಸಬೇಕಾದ ಪರಿಸ್ಥಿತಿ ಈ ಕುಟುಂಬಗಳಿಗೆ ಬಂದಿದೆ. ಇದನ್ನು ಸರಿಪಡಿಸಿಕೊಡಿ ಎಂದು ಅಧಿಕಾರಿಗಳ ಬಳಿ ಹೋದರೆ ಆ ಮೇಲೆ ಬನ್ನಿ ಈಗ ಆಗಲ್ಲ ಎನ್ನುವ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *