ವಿಜಯ್ ದೇವರಕೊಂಡ ಜತೆ ಅಂತರ ಕಾಯ್ದುಕೊಂಡ ರಶ್ಮಿಕಾ: ಇದು ಜ್ಯೋತಿಷಿ ಮಾತಿನ ಎಫೆಕ್ಟ್?

ಕ್ಷಿಣದ ಸಾಕಷ್ಟು ಸಿಲೆಬ್ರಿಟಿಗಳಿಗೆ ಭವಿಷ್ಯ ಹೇಳುವ ವೇಣು ಸ್ವಾಮಿ, ಈ ಹಿಂದೆ ರಶ್ಮಿಕಾ ಮಂದಣ್ಣ ಅವರ ಭವಿಷ್ಯ ನುಡಿದಿದ್ದರು ಅನ್ನುವ ವಿಷಯ ತೆಲುಗು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ವೇಣು ಸ್ವಾಮಿ ಹತ್ತಿರ ರಶ್ಮಿಕಾ ಮತ್ತು ಅವರ ತಾಯಿ ಭವಿಷ್ಯ ಕೇಳಲು ಹೋಗುತ್ತಿದ್ದರು ಎಂಬ ವಿಷಯವನ್ನು ಸ್ವತಃ ಜ್ಯೋತಿಷಿ ವೇಣು ಸ್ವಾಮಿ ಅವರೇ ಬಹಿರಂಗ ಪಡಿಸಿದ್ದರು. ಇವರು ಹೇಳಿದ್ದ ಭವಿಷ್ಯ ರಶ್ಮಿಕಾ ಜೀವನದಲ್ಲಿ ನಿಜವಾಗಿದ್ದರಿಂದ ಪದೇ ಪದೇ ರಶ್ಮಿಕಾ ಕುಟುಂಬ ಇವರನ್ನು ಸಂಪರ್ಕಿಸುತ್ತಿತ್ತು ಎನ್ನುವುದು ಬಹಿರಂಗ.  ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

ಹಾಗಾಗಿಯೇ ಕೆಲ ತಿಂಗಳ ಹಿಂದೆ, ವೇಣು ಸ್ವಾಮಿ ಬಳಿ ರಶ್ಮಿಕಾ ಅವರು ಭವಿಷ್ಯ ಕೇಳಲು ಹೋದಾಗ ಆತಂಕಕಾರಿ ಸಂಗತಿಯೊಂದನ್ನು ತಿಳಿಸಿದ್ದರಂತೆ. ತಾವು ಹೇಳಿದಂತೆ ಮಾಡದೇ ಹೋದರೆ, ಮುಂದಿನ ಭವಿಷ್ಯ ಕರಾಳವಾಗಿ ಇರಲಿದೆ ಎಂಬ ಎಚ್ಚರಿಕೆ ಕೂಡ ಕೊಟ್ಟಿದ್ದರಂತೆ. ಆದರೆ, ಆ ವೇಳೆಯಲ್ಲಿ ಜ್ಯೋತಿಷಿಯ ಮೇಲೆಯೇ ಗರಂ ಆಗಿದ್ದರಂತೆ ರಶ್ಮಿಕಾ. ಇದೀಗ ಜ್ಯೋತಿಷಿ ಹೇಳಿದ್ದು ನಿಜವಾಗುತ್ತಿದೆ ಅನಿಸಿದ್ದರಿಂದ ಜ್ಯೋತಿಷಿ ಹೇಳಿದಂತೆ ಕೇಳಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

ಈ ಹಿಂದೆ ವೇಣು ಸ್ವಾಮಿ ಅವರು ರಶ್ಮಿಕಾ ಅವರಿಗೆ ‘ನಿನಗೆ ಲವ್ ಅಫೇರ್ ಆಗುವುದಿಲ್ಲ. ಹಾಗಾಗಿ ವಿಜಯ್ ದೇವರಕೊಂಡ ಜೊತೆಗೆ ಕಾಣಿಸಿಕೊಳ್ಳದೇ ಇರುವುದು ಒಳ್ಳೆಯದು ಎಂದು ಭಯಂಕರ ಜ್ಯೋತಿಷ್ಯ ಹೇಳಿದ್ದರಂತೆ. ನಿಮ್ಮ ಬಳಿ ಬರುವ ಅನೇಕರಿಂದ ಪ್ರೀತಿಯಲ್ಲಿ ಮೋಸ ಹೋಗುತ್ತೀರಿ. ಲವ್ ಅಫೇರ್ ನಿಮಗೆ ಸಮಸ್ಯೆಯಾಗಿ ಕಾಡಲಿದೆ ಎಂದಿದ್ದರಂತೆ. ಈ ಮಾತಿಗೆ ರಶ್ಮಿಕಾ ಗರಂ ಆಗಿ ವೇಣು ಸ್ವಾಮಿ ಅವರಿಂದಲೇ ದೂರವಾಗಿದ್ದರಂತೆ. ಈಗ ವೇಣು ಸ್ವಾಮಿ ಅವರ ಮಾತು ಕೇಳುವುದಕ್ಕಾಗಿಯೇ ವಿಜಯ್ ದೇವರಕೊಂಡ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬವಿದ್ದು, ಅಂದು ರಶ್ಮಿಕಾ ಮಂದಣ್ಣ ವಿಶ್ ಮಾಡುವುದಾಗಲೇ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಾಗಲಿ ಮಾಡಿಲ್ಲ. ವಾರಕ್ಕೆರಡು ಬಾರಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇತ್ತೀಚೆಗೆ ಒಂಟಿಯಾಗಿ ಓಡಾಡುತ್ತಿದೆ. ಹೀಗಾಗಿ ರಶ್ಮಿಕಾ ಅವರು ವಿಜಯ್ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನುವುದು ತೆಲುಗು ಸಿನಿಮಾ ರಂಗದಲ್ಲಿ ಹರಡಿದ ಗಾಸಿಪ್.

Comments

Leave a Reply

Your email address will not be published. Required fields are marked *