ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ-ಟೀಕೆಗಳಿಗೆ ರಮ್ಯಾ ಪ್ರತ್ಯುತ್ತರ

ಬೆಂಗಳೂರು: ಮಂಡ್ಯ ಮಾಜಿ ಸಂಸದೆ, ನಟಿ ರಮ್ಯಾ ತಮ್ಮ ಮೇಲಿನ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದು, ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸರ್ಧಾರ್ ಪ್ರತಿಮೆಯ ಕೆಳಗೆ ನಿಂತಿದ್ದ ಫೋಟೋ ಟ್ವೀಟ್ ಮಾಡಿ ಹಕ್ಕಿಯ ಹಿಕ್ಕೆ ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಆದರೆ ತಮ್ಮ ವರ್ತನೆಯನ್ನು ಮತ್ತೆ ಪುನಾರವರ್ತನೆ ಮಾಡಿರುವ ರಮ್ಯಾ, ತಮ್ಮ ವಿರುದ್ಧ ಟೀಕೆ ಮಾಡಿದವರ ಹಾಗೂ ಕೆಲವರು ಕೆಳ ಮಟ್ಟದ ಪದ ಪ್ರಯೋಗ ಮಾಡಿದ್ದಾರೆ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಅಂತ ಹೇಳಿದ್ದಾರೆ.ಇದನ್ನೂ ಓದಿ: ಪಕ್ಷಿ ಹಿಕ್ಕೆ ಹಾಕಿದೆ ಎಂದು ಪ್ರಧಾನಿಯನ್ನು ಕಿಚಾಯಿಸಿ ಮತ್ತೆ ಟ್ರೋಲ್ ಆದ ರಮ್ಯಾ

ತಮ್ಮ ಇನ್‍ ಸ್ಟಾಗ್ರಾಮ್‍ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿರುವ ರಮ್ಯಾ, ತಾವು ಚಿಕಿತ್ಸೆ ಪಡೆದ ಬಳಿಕ ಸದ್ಯ ಆರೋಗ್ಯವಾಗಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಇದರೊಂದಿಗೆ ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಸ್ಟೇಟಸನ್ನು ಅಪ್ಲೋಡ್ ಮಾಡಿ ಎಲ್ಲರ ಟೀಕೆಗೆ ತಿರುಗೇಟು ನೀಡಿದ್ದಾರೆ.

ನಟ ಅಂಬಿರೀಶ್ ಅವರ ಅಂತಿಮ ದರ್ಶನಕ್ಕೂ ಆಗಮಿಸದ ರಮ್ಯಾ ಅವರ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಹಿಂದೆ ಕ್ಷೇತ್ರದಲ್ಲಿ ಮತದಾನ ಮಾಡಲು ಕೂಡ ಮನವಿ ಮಾಡಿದ್ದರು. ಆದರೆ ಅಭಿಮಾನಿಗಳ ಯಾವುದೇ ಮಾತಿಗೂ ಪ್ರತಿಕ್ರಿಯೆ ನೀಡದ ರಮ್ಯಾ, ಚುನಾವಣೆಯ ಸೋಲಿನ ಬಳಿಕ ಕ್ಷೇತ್ರ ಜನತೆಯನ್ನು ಮರೆತಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದರು.

https://twitter.com/divyaspandana/status/1057842482975817728

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *