ವೀರಶೈವ ಸಮಾಜದ ವ್ಯಕ್ತಿ ಸಿಎಂ ಆಗುವುದನ್ನು ತಪ್ಪಿಸಿದ್ದಕ್ಕೆ ರಂಭಾಪುರಿ ಶ್ರೀ ಆಕ್ರೋಶ

ಬಳ್ಳಾರಿ: ಒಬ್ಬ ವೀರಶೈವದ ವ್ಯಕ್ತಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿರುವುದನ್ನು ರಾಜ್ಯದ ಜನ ಖಂಡಿಸುತ್ತಾರೆ. ಕಾಂಗ್ರೆಸ್ – ಜೆಡಿಎಸ್ ಪಕ್ಷಗಳದ್ದು ಅಪವಿತ್ರ ಮೈತ್ರಿಯಾಗಿದೆ ಎಂದು ರಂಭಾಪುರಿ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ನಡೆದ ಪಂಡಿತ ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಪ್ರಧಾನ ಸಮಾರಂಭದ ನಂತರ ಮಾತನಾಡಿದ ರಂಭಾಪುರಿ ಶ್ರೀಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಈ ಮೈತ್ರಿ ನಾಡಿನ ಜನರಿಗೆ ನೋವು ಉಂಟುಮಾಡಿದೆ. ಯಡಿಯೂರಪ್ಪನವರಿಗೆ ಹಲವು ಜೆಡಿಎಸ್, ಕಾಂಗ್ರೆಸ್ ಶಾಸಕರು ಬೆಂಬಲ ನೀಡಲು ಮುಂದಾಗಿದ್ದರು. ಆದರೆ ಅವರನ್ನು ಕಟ್ಟಿ ಹಾಕಲಾಗಿತ್ತು ಎಂದು ಆರೋಪಿಸಿದರು.

ನಾಡಿನ ಜನರ ಭಾವನಗೆಳನ್ನು ಒಡೆದು ಆಳಿದ ಕಾಂಗ್ರೆಸ್ ಜೊತೆ ಜೆಡಿಎಸ್ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಬಿಜೆಪಿಯ ಬಿಎಸ್‍ವೈ ಸಿಎಂ ಆಗಿದ್ದರು. ಆದರೆ ತರಾತುರಿಯಲ್ಲಿ ನಡೆದ ಬಹುಮತ ಸಾಬೀತು ಪ್ರಕರಣದಲ್ಲಿ ಬಿಎಸ್‍ವೈ ಅಸಹಾಯಕರಾದರು ಎಂದರು.

ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಳ್ಳದ ಕಾಂಗ್ರೆಸ್, ಜೆಡಿಎಸ್ ಚುನಾವಣೆ ನಂತರ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡಿದೆ. ಬಿಎಸ್‍ವೈ ರಾಜ್ಯದ ಜನರ ಮನಸ್ಸಿನಲ್ಲಿದ್ದಾರೆಂದು ಎಂದು ಹೇಳಿ ಹೊಗಳಿದರು.

Comments

Leave a Reply

Your email address will not be published. Required fields are marked *