ಬಾಮೈದನ ಹತ್ಯೆಗೆ ಯತ್ನಿಸಿದ ಕೆಎಂಎಫ್ ಅಧ್ಯಕ್ಷ!

ರಾಮನಗರ: ಜಮೀನು ವ್ಯಾಜ್ಯ ವಿಚಾರವಾಗಿ ಕೆಎಂಎಫ್ ಅದ್ಯಕ್ಷ ಪಿ.ನಾಗರಾಜ್ ತನ್ನ ಬಾಮೈದನ ಮೇಲೆ ಕಾರು ಹತ್ತಿಸಿ ಕೊಲ್ಲಲು ಮುಂದಾದ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಯಗಾನಹಳ್ಳಿ ಸರ್ವೆ ನಂ 91, ಮಾದಾಪುರ ಸರ್ವೆ ನಂ 36ರ ಜಮೀನು ವಿಚಾರವಾಗಿ ಗಲಾಟೆ ಬಾವ ಬಾಮೈದನ ನಡುವೆ ವೈಮನಸ್ಸಿತ್ತು. ಇದು ತಾಕ್ಕಕೇರಿ ಮೊನ್ನೆ ಬಾಮೈದ ಲೋಕೇಶ್ ಮೇಲೆ ನಾಗರಾಜ್ ಕಾರು ಹತ್ತಿಸಿ ಕೊಲ್ಲಲು ಮುಂದಾಗಿದ್ದಾರೆ.

ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ವಿರುದ್ಧ ಅವರ ಬಾಮೈದ ಲೋಕೇಶ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *