ಡಿಸಿಎಂ ಜೊತೆಗಿನ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‍ನಲ್ಲಿ ಬ್ಯುಸಿ

ರಾಮನಗರ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ನಡೆದ ರಾಮನಗರ ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ನಲ್ಲಿ ತಲ್ಲೀನರಾಗಿದ್ದಾರೆ. ಡಿಸಿಎಂ ಸಭೆಯಲಿಬ್ಯುಸಿಯಾಗಿದ್ದರೆ, ಅಧಿಕಾರಿಗಳು ಮೊಬೈಲ್‍ನಲ್ಲಿ ಯೂಟ್ಯೂಬ್ ನೋಡುವುದರಲ್ಲಿ ಅವರಿಗಿಂತ ಬ್ಯುಸಿಯಾಗಿದ್ದರು.

ಇಂದು ರಾಮನಗರದ ಜಿ.ಪಂ ಭವನದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಕೆಡಿಪಿ ನಡೆದಿದ್ದು, ಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆಯೇ ಡಿಸಿಎಂ ಭಾಗವಹಿಸಿದ್ದಾರೆ ಎನ್ನವುದನ್ನೂ ಮರೆತು ಅಧಿಕಾರಿಗಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದರು.

ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ನಗರಸಭೆ ಆಯುಕ್ತರು ಸೇರಿದಂತೆ ಬಹುತೇಕ ಅಧಿಕಾರಿಗಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದರು. ವಾಟ್ಸಪ್ ಚಾಟಿಂಗ್, ವಾಟ್ಸಪ್ ಸ್ಟೇಟಸ್ ನ ಡ್ಯಾನ್ಸ್ ವಿಡಿಯೋಗಳು, ಯೂಟ್ಯೂಬ್ ನೋಡುವುದರಲ್ಲಿ ನಿರತರಾಗಿದ್ದರು. ಅಧಿಕಾರಿಗಳು ಮೊಬೈಲ್ ನೋಡುವುದರಿಂದ ಬೇಸತ್ತು ಸಭೆ ಬಳಿಕ ಉಪಮುಖ್ಯಮಂತ್ರಿ ಕಾರ್ಯದರ್ಶಿಯವರು ಅಶ್ವತ್ಥ ನಾರಾಯಣ ಗಮನಕ್ಕೆ ತಂದಿದ್ದಾರೆ.

Comments

Leave a Reply

Your email address will not be published. Required fields are marked *