– ಹರಕೆ ಹೊತ್ತರೆ ಮಕ್ಕಳಾಗುತ್ತೆ ಅನ್ನೋ ನಂಬಿಕೆ
– ಮಕ್ಕಳೊಂದಿಗೆ ಆಗಮಿಸಿ ಹರಕೆ ತೀರಿಸಿದ ದಂಪತಿ
ಕೋಲಾರ: ಕರ್ನಾಟಕದ ರಾಮೇಶ್ವರ, ಆವಂತಿಕಾ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಕೋಲಾರದ ಮುಳಬಾಗಿಲು ತಾಲೂಕಿನ ಸುಪ್ರಸಿದ್ಧ ಆವನಿ ಕ್ಷೇತ್ರದ ಪ್ರಸನ್ನ ರಾಮಲಿಂಗೇಶ್ವರ ರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ವಿಶೇಷತೆ ಎಂಬಂತೆ ಆವನಿ ಕ್ಷೇತ್ರ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇದೇ ಸ್ಥಳದಲ್ಲಿ ಸೀತಾಮಾತೆ ಲವ-ಕುಶರಿಗೆ ಜನ್ಮ ನೀಡಿದ್ದರು ಎನ್ನುವುದಕ್ಕೆ ಇಲ್ಲಿ ಸಾಕಷ್ಟು ನಿದರ್ಶನಗಳಿವೆ. ಹಾಗಾಗಿ ಮಕ್ಕಳು ಇಲ್ಲದವರು, ಮಕ್ಕಳ ಮೇಲಿನ ಮಮತೆ ಇರುವವರು, ಈ ಬೆಟ್ಟದಲ್ಲಿರುವ ಧನಷ್ಕೋಟಿಯಲ್ಲಿ ಸ್ನಾನ ಮಾಡಿ, ದೇವಿ ಮುಂದೆ ಮಗ್ನರಾದಾಗ ಕನಸಿನಲ್ಲಿ ತೊಟ್ಟಿಲು, ಹೂವು, ಮಗು ಕಾಣಿಸಿಕೊಳ್ಳುತ್ತದೆ. ಆಗ ಮಕ್ಕಳಾಗುವುದು ಖಚಿತ ಎಂಬ ನಂಬಿಕೆ ಇಲ್ಲಿದೆ.

ದೇವರ ಪ್ರಾರ್ಥನೆ ಮಾಡುತ್ತಾ ಇಲ್ಲಿರುವ ಹೊರಳುಗುಂಡಿಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹುರಳಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ಪ್ರಬಲವಾದ ನಂಬಿಕೆ ಇಲ್ಲಿದೆ. ಹಿರಿಯರು ಹೇಳುವ ಹಾಗೆ ಈ ಹಿಂದೆ ಇಂತಹ ಸೇವೆ ಮಾಡಿ ಮಕ್ಕಳಾಗಿರುವ ಸಾವಿರಾರು ನಿದರ್ಶನಗಳಿವೆ. ತಮ್ಮ ಮಕ್ಕಳ ಜೊತೆ ಬಂದು ಹರಕೆ ತೀರಿಸುವುದು ಇಲ್ಲಿಯ ವಿಶೇಷ. ಹಾಗಾಗಿ ಇಂದು ನೂರಾರು ಮಹಿಳೆಯರು ಮಕ್ಕಳಾಗೋ ಕನಸು ಹೊತ್ತು, ರಥೋತ್ಸವದಲ್ಲಿ ಭಾಗವಹಿಸಿ ಹರಕೆ ಮಾಡಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply