ಭೀಕರ ಪ್ರವಾಹವಾದ್ರೂ `ರಕ್ತೇಶ್ವರಿ’ ಗುಡಿಗೆ ಏನೂ ಆಗಿಲ್ಲ- ದಿಡುಪೆಯಲ್ಲೊಂದು ಅಚ್ಚರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಪ್ರಾಕೃತಿಕ ವಿಕೋಪ, ನೆರೆ ಹಾವಳಿಗೆ ತುತ್ತಾಗಿ ಮನೆ, ಕೃಷಿಭೂಮಿ ನಾಶವಾಗಿ ಹೋಗಿದೆ. ಆದರೆ, ಇದರ ಮಧ್ಯೆ ಇದ್ದ ದೈವಸ್ಥಾನಗಳಿಗೆ ಯಾವುದೇ ಹಾನಿಯಾಗದೇ ಇರುವುದು ಅಚ್ಚರಿ ಮೂಡಿಸಿದೆ.

ಜಲ ಸ್ಫೋಟಕ್ಕೆ ಮನೆ, ಸುತ್ತಲ ಕೃಷಿ ಭೂಮಿ ಕೊಚ್ಚಿ ಹೋದರೂ, ತುಳುನಾಡಿನ ಕಾರಣಿಕ ಶಕ್ತಿಯ ಗುಡಿಗಳಿಗೆ ಕಿಂಚಿತ್ತೂ ಹಾನಿಯಾಗಿಲ್ಲ. ಬೆಳ್ತಂಗಡಿ ತಾಲೂಕಿನ ದಿಡುಪೆ ಪ್ರದೇಶದಲ್ಲಿ ನೆರೆ ಹಾವಳಿಗೆ ಬೆಟ್ಟ ಸ್ಫೋಟಗೊಂಡು ಬೃಹತ್ ಮರಗಳು ಛಿದ್ರ, ಛಿದ್ರವಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು.

ಮರಗಳ ದಿಮ್ಮಿಗಳ ಜೊತೆ ಬಂದ ನದಿಯ ಪ್ರವಾಹಕ್ಕೆ ತುತ್ತಾಗಿ ಸೇತುವೆ, ಆಸು-ಪಾಸಿನ ಮನೆ, ಕೃಷಿ ಭೂಮಿಯನ್ನೂ ಬಿಡದೆ ಸರ್ವನಾಶ ಮಾಡಿತ್ತು. ಆದರೆ ಅದೇ ಸ್ಥಳದಲ್ಲಿ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯಗಳಿದ್ದು, ಅವುಗಳು ಒಂದಿಂಚೂ ಧಕ್ಕೆಯಾಗದೆ ಉಳಿದಿವೆ.

ಸ್ಥಳೀಯರಲ್ಲಿ ಈ ವಿದ್ಯಮಾನ ಆಶ್ಚರ್ಯ ತಂದಿದ್ದು, ದೈವೀ ಪವಾಡಕ್ಕೆ ಬೆರಗಾಗಿದ್ದಾರೆ.

Comments

Leave a Reply

Your email address will not be published. Required fields are marked *