ಅಕ್ರಮ ಸಂಬಂಧ ಹೊಂದಿದ್ದ ಮೂವರ ಜೊತೆ ಸೇರಿ ಪತಿಯನ್ನೇ ಕೊಂದ್ಲು!

ರಾಜ್‍ಕೋಟ್: ಅಕ್ರಮ ಸಂಬಂಧ ಹೊಂದಿದ್ದ ಮೂವರ ಜೊತೆಗೆ ಸೇರಿ ಪತಿಯನ್ನೇ ಪತ್ನಿಯೊಬ್ಬಳು ಕೊಲೆ ಮಾಡಿದ ಘಟನೆ ಗುಜರಾತ್‍ನಲ್ಲಿ ನಡೆದಿದ್ದು, ಮೂರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಗಾಂಧಿದಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪ್ರಹ್ಲಾದ್ ಕೊಲೆಯಾದ ಪತಿ. ಪ್ರಹ್ಲಾದ್ ಪತ್ನಿ ಧನ್ಬಾಯಿ ಮಹೇಶ್ವರಿ ಆಕೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ನರಸಿಂಹ ಕೊಲಿ, ರವಿ ಶಂಕರ್ ಮಹೇಶ್ವರಿ ಮತ್ತು ಮಹೇಶ್ ಮಹೇಶ್ವರಿ ಆರೋಪಿಗಳು.

ಕೃತ್ಯ ಸೆಪ್ಟೆಂಬರ್ 13ರಂದು ನಡೆದಿದ್ದು, ಆರಂಭದಲ್ಲಿ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸ್ ತನಿಖೆಯಿಂದಾಗಿ ಪತ್ನಿಯ ಅಮಾನವೀಯ ಕೃತ್ಯ ಬಯಲಾಗಿದೆ. ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?:
ಧನ್ಬಾಯಿ ಮಹೇಶ್ವರಿಯು ನರಸಿಂಹ, ರವಿ ಶಂಕರ್, ಹಾಗೂ ಮಹೇಶ್ ಎಂಬವರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯವು ಪ್ರಹ್ಲಾದ್ ಗಮನಕ್ಕೆ ಬಂದಿದ್ದರಿಂದ ಧನ್ಬಾಯಿಯನ್ನು ವಿಚಾರಿಸಿದ್ದಾನೆ. ಎಲ್ಲಿ ಈ ಅಕ್ರಮ ಸಂಬಂಧ ಬಯಲಿಗೆ ಬರುತ್ತದೆ ಅಂತಾ ಅಕ್ರಮ ಸಂಬಂಧ ಹೊಂದಿದ್ದ ಮೂವರ ಜೊತೆಗೆ ಸೇರಿ ಕೊಲೆಗೆ ಹಂಚು ರೂಪಿಸಿದ್ದಾಳೆ. ನಾಲ್ವರು ಸೇರಿ ಪ್ರಹ್ಲಾದ್‍ಗೆ ಕಿರುಕುಳ ನೀಡಿ, ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ್ದಾರೆ.

ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಪತಿ ವಿದ್ಯುತ್ ಸ್ಪರ್ಶ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಧನ್ಬಾಯಿ ಹೇಳಿದ್ದಾಳೆ. ಆದರೆ ಪ್ರಹ್ಲಾದ್ ಸಹೋದರಿಯ ಪತಿ ಲಾಲ್‍ಜಿ ಕೊಲೆ ಶಂಕೆ ವ್ಯಕ್ತಪಡಿಸಿ ಗಾಂಧಿದಾಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಧನ್ಬಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಆಕೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮೂವರನ್ನು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *