ಗುಡುಗು ಸಹಿತ ಭಾರೀ ಮಳೆ – ಸಿಡಿಲಿಗೆ ಯುವಕ ಬಲಿ

ಹಾಸನ/ಮಂಗಳೂರು: ದಕ್ಷಿಣ ಕನ್ನಡ, ಕೊಡಗು ಹಾಗೂ ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಹಾಸನ ನಗರದಲ್ಲಿ ಗುಡುಗುಗಳೊಂದಿಗೆ ತುಂತುರು ಮಳೆಯಾಗಿದೆ. ಕಾಫಿ, ಭತ್ತ ಹಾಗೂ ರಾಗಿ ಕಟಾವಿಗೆ ಬಂದಿದ್ದು, ಆದರೆ ಗುರುವಾರ ಸುರಿದ ಅಕಾಲಿಕ ಮಳೆಗೆ ಬೆಳೆಗಳು ನಾಶವಾಗಿವೆ. ಇದರಿಂದ ರೈತರಿಗೆ ಕೊಂಚ ನಿರಾಸೆಯಾಗಿದೆ. ಆದರೆ ಬಿಸಿಲಿನ ಬೇಗೆಯಲ್ಲಿ ತುಂತುರು ಮಳೆ ಸುರಿದು ಮಳೆರಾಯ ಕೊಂಚ ತಂಪೆರೆದಿದ್ದಾನೆ.

ಇನ್ನು ಕೊಡಗಿನಲ್ಲಿ 2 ದಿನದಿಂದ ಸಂಜೆ ವೇಳೆಗೆ ಮಳೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕುಮಾರಾಧಾರ ವಸತಿಗೃಹ ಬಳಿ ಸಿಡಿಲು ಬಡಿದು ಯುವಕ ಸಾವನಪ್ಪಿದ್ದಾನೆ. ಸುಳ್ಯ ತಾಲೂಕಿನ ಹರಿಹರ ನಿವಾಸಿ ಪ್ರವೀಣ್ (21) ಮೃತ ದುರ್ದೈವಿಯಾಗಿದ್ದು, ವಸತಿಗೃಹ ಬಳಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಸುಬ್ರಹ್ಮಣ್ಯ ಸುತ್ತಮುತ್ತ ಗುಡುಗು ಸಿಡಿಲಿನೊಂದಿದೆ ಅಕಾಲಿಕ ಮಳೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *