ಕೊರೊನಾ ವೈರಸ್ ಆತಂಕದ ನಡುವೆ ಬೆಂಗಳೂರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಕೊರೊನಾ ವೈರಸ್ ಬಗ್ಗೆನೇ ಮಾತು. ಈ ನಡುವೆ ರಾತ್ರಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಹಾಟ್ ಹಾಟ್ ಆಗಿದ್ದ ಬೆಂಗಳೂರು ಸ್ಪಲ್ಪ ಮಟ್ಟಿಗೆ ಕೂಲ್ ಆಗಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಳೆ ಬರುವುದು ತುಂಬಾನೇ ಕಡಿಮೆ. ಆದರೆ ಮಾರ್ಚ್ ಮೊದಲ ವಾರದಲ್ಲೇ ಮಳೆಯಾಗಿರುವುದು ಸಿಲಿಕಾನ್ ಸಿಟಿ ಮಂದಿಗೆ ಕೂಲ್ ಕೂಲ್ ವಾತವಾರಣ ನಿರ್ಮಾಣ ಮಾಡಿದೆ. ಈ ಖುಷಿಯ ನಡುವೆಯೂ ಒಂದಷ್ಟು ಮಹಾಮಾರಿ ಕೊರೊನಾ ವೈರಸ್ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು ಸೇರಿದಂತೆ ವೈರಸ್ ಹರಡುವ ಭೀತಿಯಲ್ಲಿರುವ ಜನರಿಗೆ ಮಳೆ ಬಂದಿರೋದು ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಕೊರೊನಾ ವೈರಸ್ ತಂಪಾದ ವಾತವಾರಣದಲ್ಲಿ ಹೆಚ್ಚಾಗಿ ಹರಡುವ ಸಾಧ್ಯತೆ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ಬೇಸಿಗೆಯಲ್ಲಿ ಹರಡುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತಿದ್ದರು. ಆದರೆ ಮಳೆ ಬಂದ ಕಾರಣ, ವಾತವಾರಣದಲ್ಲಿ ಬದಲಾವಣೆ ಆಗುವ ಹಿನ್ನೆಲೆಯಲ್ಲಿ ಮಳೆಯ ಕೂಲ್ ವಾತವಾರಣದ ನಡುವೆ ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.

Comments

Leave a Reply

Your email address will not be published. Required fields are marked *