ಚಿಕ್ಕಮಗ್ಳೂರು, ಮಡಿಕೇರಿಯಲ್ಲಿ ತಗ್ಗಿದ ಮಳೆ- ಇಂದಿನಿಂದ ಚಾರ್ಮಾಡಿ ಘಾಟ್ ಓಪನ್

ಚಿಕ್ಕಮಗಳೂರು/ಮಡಿಕೇರಿ: ಚಿಕ್ಕಮಗಳೂರು, ಹಾಸನ ಹಾಗೂ ಮಡಿಕೇರಿಯಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಇಂದು ಇಳಿಮುಖವಾಗಿದೆ.

ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಮೂಡಿಗೆರೆ ನಾಲ್ಕು ತಾಲೂಕಿನಲ್ಲೂ ನಿನ್ನೆ ಸಂಜೆಯಿಂದಲೇ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಕಾಫಿನಾಡಿನ ಮಲೆನಾಡು ಭಾಗ ಸಹಜ ಸ್ಥಿತಿಯತ್ತ ಮರಳಿದೆ.

ತುಂಗಾ, ಭದ್ರಾ ನದಿ ಮೈದುಂಬಿ ಹರಿಯುತ್ತಿವೆ. ಇನ್ನು ಜಲಾವೃತವಾಗಿದ್ದ ರಸ್ತೆಗಳಲ್ಲಿ ಸಂಚಾರ ಆರಂಭವಾಗಿದೆ. ಹೊರನಾಡು, ಕುದುರೆಮುಖ ಮಾರ್ಗದಲ್ಲಿ ಸೇತುವೆಗಳು ಮುಳುಗಡೆಯಾಗಿತ್ತು. ಇದೀಗ ವರುಣನ ಅಬ್ಬರ ತಗ್ಗಿದ್ದು ಸೇತುವೆಗಳು ಸಂಚಾರ ಮುಕ್ತವಾಗಿದೆ. ಇತ್ತ ಇಂದಿನಿಂದ ಚಾರ್ಮಾಡಿಯಲ್ಲೂ ಕೂಡ ಸಂಚಾರ ಆರಂಭವಾಗಿದೆ.

ಜಲಾವೃತಗೊಂಡಿದ್ದ ಶೃಂಗೇರಿ ಶಾರದಾ ಪೀಠದಲ್ಲಿ ಕೂಡ ಮಳೆ ನೀರಿನ ಪ್ರಂಆನ ತಗ್ಗಿದ್ದು, ಎಂದಿನಂತೆ ಮುಂಜಾನೆಯಿಂದ ದೇವರ ದರ್ಶನ ಕಾರ್ಯದಲ್ಲಿ ಭಕ್ತರು ತೊಡಗಿದ್ದಾರೆ.

ಮಡಿಕೇರಿಯಲ್ಲೂ ಮಳೆ ನಿಂತಿದ್ದು, ತಲಕಾವೇರಿ, ಭಾಗಮಂಡಲದಲ್ಲಿ ರಸ್ತೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ವೀರಾಜಪೇಟೆಯ ತಾಲೂಕಿನ ಹಲವು ಮನೆಗಳು ಮುಳುಗಡೆ ಭೀತಿಯಲ್ಲಿವೆ. ಭಗಂಡೇಶ್ವರ ದೇವಾಲಯ ಜಲಾವೃತ, ಮನೆಗಳಿಗೆ ನೀತು ನಿಗಿತ್ತು. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

Comments

Leave a Reply

Your email address will not be published. Required fields are marked *