ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ರಾಯಚೂರಿನಲ್ಲಿ ವಿಶೇಷ ಪ್ರಾರ್ಥನೆ

ರಾಯಚೂರು: ಉಡುಪಿಯ ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆ ದಾಖಲಾದ ಹಿನ್ನೆಲೆ ಬೇಗ ಗುಣಮುಖರಾಗಲಿ ಎಂದು ಅವರ ಶಿಷ್ಯ ಬಳಗ ರಾಯಚೂರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

ರಾಯಚೂರು ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಪ್ರ ಯುವಕ ಸಂಘ ಹಾಗೂ ರಾಘವೇಂದ್ರ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.

ಹಿಂದು ಧರ್ಮದ ಉನ್ನತಿಗೆ ಶ್ರಮಿಸಿ ಹಿಂದು ಧರ್ಮದ ಪ್ರಮುಖರಾಗಿರುವ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳು ಬೇಗ ಗುಣಮುಖರಾಗಲಿ ಇನ್ನಷ್ಟು ದಿನ ಭಕ್ತರಿಗೆ ಶಿಷ್ಯರಿಗೆ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥಿಸಿದರು. ನೂರಾರು ಜನರು ವಿಷ್ಣು ಸಹಸ್ರ ಪರಾಯಣ, ಮನ್ನಿಸೋತ್ರು, ಸುಂದರಕಾಂಡ, ಗುರುಸ್ತ್ರೋತ್ರ ಪಾರಾಯಣ ಮಾಡಿದರು. ಸ್ವಾಮಿಗಳ ಆರೋಗ್ಯ ವೃದ್ಧಿಯಾಗಲಿ ಎಂದು ಶ್ರೀರಾಘವೇಂದ್ರ ಸ್ವಾಮಿಗಳು ಹಾಗೂ ಟೀಕಾರಾಯರ ಸನ್ನಿದಿಯಲ್ಲಿ ಪ್ರಾರ್ಥಿಸಿದರು.

Comments

Leave a Reply

Your email address will not be published. Required fields are marked *