ನೆರೆಯಿಂದ ಸಂತ್ರಸ್ತರನ್ನು ರಕ್ಷಿಸು: ಜಗ್ಗೇಶ್ ಪ್ರಾರ್ಥನೆ

ರಾಯಚೂರು: ನೆರೆಯಿಂದ ಸಂತ್ರಸ್ತರನ್ನು ರಕ್ಷಿಸು ಎಂದು ರಾಯರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಚಿತ್ರನಟ ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯ ಹಿನ್ನೆಲೆ, ಇಂದು ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದ ಜಗ್ಗೇಶ್ ನಾನು ಚಿಕ್ಕವನಿದ್ದಾಗಿನಿಂದಲೂ ರಾಯರ ಭಕ್ತ. ನನ್ನನ್ನು ರಾಯರ ಸನ್ನಿಧಾನದಲ್ಲಿ ಕುರಿಸಿ ಪ್ರಾರ್ಥಿಸಲು ಸ್ವಾಮೀಜಿಗಳು ಅವಕಾಶ ನೀಡಿದ್ದಾರೆ. ಇದು ನನ್ನ ಸೌಭಾಗ್ಯ ಎಂದರು.

ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಬಂದಿದೆ. ಈ ನೆರೆಯಿಂದ ಸಂತ್ರಸ್ತರನ್ನು ರಕ್ಷಿಸಲಿ ಎಂದು ರಾಯರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನೆರೆ ಸಂದರ್ಭದಲ್ಲಿ ಚಿತ್ರರಂಗ ದಕ್ಷಿಣ, ಉತ್ತರ ಕರ್ನಾಟಕ ಎಂಬ ಪ್ರತ್ಯೇಕವಾಗಿ ನೋಡುವುದಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸ್ಪಂದಿಸಲಿವೆ ಎಂದು ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *