ಇನ್ಫೋಸಿಸ್ ಆಹಾರ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ಪ್ರಚಾರ

ರಾಯಚೂರು: ಕೊರೊನಾ ವೈರಸ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ ಕೆಲವು ಸಂಘಸಂಸ್ಥೆಗಳು ಆಹಾರ ಕಿಟ್ ಹಂಚಿಕೆ ಮಾಡುತ್ತಿವೆ. ಆದರೆ ರಾಯಚೂರು ಸೇರಿದಂತೆ ಹಲವೆಡೆ ಕೆಲ ಬಿಜೆಪಿ ಮುಖಂಡರು ಕಿಟ್ ಹಂಚಿಕೆಯಲ್ಲೂ ಪ್ರಚಾರ ರಾಜಕಾರಣ ಮಾಡುತ್ತಿದ್ದಾರೆ.

ಇನ್ಫೋಸಿಸ್ ನೀಡಿದ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ರಾಜಕಾರಣ ನಡೆಸಿದ್ದಾರೆ. ಅಕ್ಷಯ ಪಾತ್ರೆ ಯೋಜನೆಯಡಿ ಇನ್ಫೋಸಿಸ್ ನಿಂದ ನೀಡಲಾಗಿದ್ದ ಕಿಟ್ ಗಳ ಮೇಲೆ ತಮ್ಮ ಫೋಟೋ ತಮ್ಮ ಸಂಸ್ಥೆ ಹೆಸರು ಹಾಕಿಕೊಂಡು ರಾಜಕಾರಣಿಗಳು ಕಿಟ್ ವಿತರಿಸುತ್ತಿದ್ದಾರೆ. ಇದನ್ನು ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

ರಾಯಚೂರಿನ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿಯಿಂದ ಪ್ರಚಾರ ನಡೆದಿದೆ. ಬಿಜೆಪಿ ಮುಖಂಡರ ಕೀಳು ಮಟ್ಟದ ಪ್ರಚಾರ ರಾಜಕೀಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *