ಅರ್ಜುನ್ ಸರ್ಜಾ ತಮ್ಮ ಆಕಳು ಕರುವಿಗೆ ಇಟ್ಟ ಹೆಸರು ‘ರಾಧೆ-ಕೃಷ್ಣ’

ಟ ಅರ್ಜುನ್ ಸರ್ಜಾ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಅದರಲ್ಲೂ ದೇಸಿ ಹಸುಗಳನ್ನು ಸಾಕುವುದೆಂದರೆ ಪ್ರಾಣ. ಅವರ ಮನೆಯಲ್ಲಿ ದೇಸಿ ಗೋವುಗಳನ್ನು ಸಾಕಲಾಗಿದೆ. ಅಲ್ಲದೇ, ನಿತ್ಯವೂ ಅವುಗಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಾರಂತೆ ಅರ್ಜುನ್ ಸರ್ಜಾ. ಇವರು ಮಾತ್ರವಲ್ಲ, ಮಕ್ಕಳು ಕೂಡ ಮೂಕ ಪ್ರಾಣಿಗಳ ಜೊತೆ ತಮ್ಮದೇ ಆದ ಭಾಷೆಯಲ್ಲೂ ಮಾತನಾಡುತ್ತಾರಂತೆ.

ಅರ್ಜುನ್ ಸರ್ಜಾ ಮನೆಯಲ್ಲಿ ಎರಡು ಪುಟಾಣಿ ಕರುಗಳಿದ್ದು. ಒಂದು ಕರುವಿಗೆ ರಾಧೆ ಮತ್ತು ಕರುವಿಗೆ ಕೃಷ್ಣ ಎಂದು ಹೆಸರಿಟ್ಟು ಪ್ರೀತಿ ತೋರುತ್ತಿದ್ದಾರೆ. ಸರ್ಜಾ ಕುಟುಂಬ ದೈವಭಕ್ತರು ಆಗಿರುವುದರಿಂದ ಗೌರವದಿಂದ ಆ ಕರುಗಳಿಗೆ ಅಂತಹ ಹೆಸರು ಇಟ್ಟಿದ್ದಾರಂತೆ. ಅರ್ಜುನ್ ಪುತ್ರಿ, ನಟಿಯೂ ಆಗಿರುವ ಐಶ್ವರ್ಯಗೆ ಆ ಕರುಗಳೆಂದರೆ, ಎಲ್ಲಿಲ್ಲದ ಪ್ರೀತಿಯಂತೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

ದಕ್ಷಿಣ ಸಿನಿಮಾ ರಂಗದ ಖ್ಯಾತ ಈ ನಟ ಕೃಷಿ ಭೂಮಿಯಲ್ಲೂ ಕಾಯಕ ಮಾಡುತ್ತಾರಂತೆ. ಅಲ್ಲದೇ, ಮಕ್ಕಳಿಗೆ ಅದನ್ನು ಹೇಳಿಕೊಟ್ಟಿದ್ದಾರಂತೆ. ಒಂದು ಕಡೆ ಆಂಜನೇಯನ ಭಕ್ತರಾಗಿ ಮತ್ತೊಂದು ಕಡೆ ಪ್ರಾಣಿಗಳ ಪ್ರಿಯರಾಗಿ ಅರ್ಜುನ್ ಅನೇಕ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಅದರಲ್ಲೂ ಅವರು ನಿರ್ಮಾಣ ಮಾಡಿರುವ ಆಂಜನೇಯನ ದೇವಸ್ಥಾನವನ್ನು ಅಭಿಮಾನಿಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲವಂತೆ.

Comments

Leave a Reply

Your email address will not be published. Required fields are marked *