ಕಾಂಗ್ರೆಸ್‌ ಸೇರಲು ಪ್ರಶಾಂತ್‌ ಕಿಶೋರ್‌ ನನ್ನ 70 ಬಾರಿ ಭೇಟಿಯಾಗಿದ್ದಾರೆ: ನವಜೋತ್‌ ಸಿಧು

ಚಂಡೀಗಢ: ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರು ನನ್ನನ್ನು ಸುಮಾರು 70 ಬಾರಿ ಭೇಟಿಯಾಗಿದ್ದು, ಕಾಂಗ್ರೆಸ್‌ ಸೇರುವುದಾಗಿ ತಿಳಿಸಿದ್ದಾರೆ ಎಂದು ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ತಿಳಿಸಿದ್ದಾರೆ.

ಕಿಶೋರ್‌ ಅವರು ಪಕ್ಷದ ಭವಿಷ್ಯದ ಬಗ್ಗೆ ಭಯಭೀತರಾಗಿದ್ದರು. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಮತಗಳಿಕೆಗೆ ಸಹಾಯವಾಗಲಿದೆ ಎಂದು ಸಿಧು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಭರವಸೆಗಳಿಗೆ ಮರುಳಾಗಬೇಡಿ, ಸಮಾಜವಾದಿ ಪಕ್ಷ ಗೆಲ್ಲಿಸಿ: ಮಮತಾ ಬ್ಯಾನರ್ಜಿ

ಪ್ರಶಾಂತ್‌ ಕಿಶೋರ್‌ ಅವರು ಕಳೆದ ವರ್ಷ ಪಂಜಾಬ್‌ ಸಿಎಂ ಆಗಿದ್ದ ಅಮರೀಂದರ್‌ ಸಿಂಗ್‌ ಅವರ ಸಲಹೆಗಾರ ಹುದ್ದೆಯನ್ನು ತ್ಯಜಿಸಿದ್ದರು. ಅದಾದ ಬಳಿಕ ಅಮರೀಂದರ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ಸಿಧು ಅವರ ನಡುವೆ ಕಾಂಗ್ರೆಸ್‌ನಲ್ಲಿ ಮನಸ್ತಾಪ ಉಂಟಾಯಿತು. ಕಾಂಗ್ರೆಸ್‌ ಒಳಜಗಳದಿಂದಾಗಿ ಅಮರೀಂದರ್‌ ಸಿಂಗ್‌ ಮುಖ್ಯಮಂತ್ರಿ ಸ್ಥಾನವನ್ನು ತೊರೆಯಬೇಕಾಯಿತು.

ಪಂಜಾಬ್‌ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹೊತ್ತಿನಲ್ಲಿ ಪ್ರಶಾಂತ್‌ ಕಿಶೋರ್‌, ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ನಡುವೆಯೇ ಕಿಶೋರ್‌ ಕಾಂಗ್ರೆಸ್‌ ಸೇರಲಿಚ್ಛಿಸಿದ್ದಾರೆ ಎಂದು ಸಿಧು ಅವರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಜವಂಶದ ಆಚೆಗೆ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ: ಮೋದಿ ವಾಗ್ದಾಳಿ

Comments

Leave a Reply

Your email address will not be published. Required fields are marked *