ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

ಚಂಡೀಗಢ: ಈ ವಿಧಾನಸಭಾ ಚುನಾವಣೆಯೂ ಪಂಜಾಬ್ ರಾಜ್ಯವನ್ನು ಇಷ್ಟ ಪಡುತ್ತಿರುವವರ ಹಾಗೂ ಮಾಫಿಯಾ ವ್ಯವಸ್ಥೆಯ ನಡುವಿನ ಸ್ಪರ್ಧೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವು ಭಯೋತ್ಪಾದನೆಯಿಂದ ಒಂದು ಪೀಳಿಗೆಯನ್ನೆ ಕಳೆದುಕೊಂಡಿದೆ. ಮತ್ತೆ ಮಾಫಿಯಾ ವ್ಯವಸ್ಥೆಗೆ ಬೆಂಬಲ ನೀಡಿದರೆ ಮುಂದಿನ ಪೀಳಿಗೆಯನ್ನು ಕಳೆದುಕೊಳ್ಳುವ ಆತಂಕ ಎದುರಗುತ್ತದೆ. ಇದರಿಂದಾಗಿ ಮತದಾರರು ಯೋಚನೆಯಿಂದ ಮತಚಲಾಯಿಸಿ ಎಂದು ಮನವಿ ಮಾಡಿದರು.

ಈ ವಿಧಾನಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪ್ರಕಾಶ್ ಸಿಂಗ್ ಬಾದಲ್ ಅವರ ಕುಟುಂಬಗಳ ಮಾಫಿಯಾಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಪಂಜಾಬ್ ಅನ್ನು ಲೂಟಿ ಮಾಡಿದರೆ ಮತ್ತೊಂದೆಡೆ ರಾಜ್ಯವನ್ನು ಪ್ರೀತಿಸುವ ಹಾಗೂ ಜನರ ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷಗಳ ನಡುವಿನ ಪೈಪೋಟಿಯಾಗಿದೆ ಎಂದು ನುಡಿದರು. ಇದನ್ನೂ ಓದಿ: ಭಾರತೀಯ ಧರ್ಮ, ಪರಂಪರೆ ಇತರ ಧರ್ಮಗಳ ವಿರುದ್ಧ ಇಲ್ಲ: ಆರಗ ಜ್ಞಾನೇಂದ್ರ

ಒಟ್ಟು 2.15 ಕೋಟಿ ಮತದಾರರನ್ನು ಹೊಂದಿರುವ ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 24,740 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಕಾಂಗ್ರೆಸ್‌ಗೆ ಆಪ್ ಪಕ್ಷ ಪ್ರಬಲ ಪೈಪೋಟಿಯನ್ನು ನೀಡಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

Comments

Leave a Reply

Your email address will not be published. Required fields are marked *