‘ರಾಜಕುಮಾರ’ನ ಮನದಾಳದ ಮಾತು ಹಂಚಿಕೊಂಡ ಪವರ್ ಸ್ಟಾರ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತನ್ನದೆಯಾದ ಛಾಪು ಮೂಡಿಸಿ, ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಚಿತ್ರ ರಾಜಕುಮಾರ. ಈ ಚಿತ್ರ ಬಿಡುಗಡೆಯಾಗಿ ಎರಡು ವರ್ಷ ಕಳೆದಿದ್ದು, ಈ ಬಗ್ಗೆ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಫುಲ್ ಖುಷಿಯಿಂದ ಚಿತ್ರದ ಬಗ್ಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ರಾಜಕುಮಾರ ಚಿತ್ರ ಪುನೀತ್ ರಾಜ್‍ಕುಮಾರ್ ಅವರ ವೃತ್ತಿ ಜೀವನದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಅದರಲ್ಲೂ ಈ ಚಿತ್ರ ತಂದುಕೊಟ್ಟ ಯಶಸ್ಸನ್ನು ನಾನು ಜೀವನ ಪೂರ್ತಿ ಮರೆಯಲ್ಲ ಎಂದು ಅಪ್ಪು ತಮ್ಮ ಫೇಸ್‍ಬುಕ್‍ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ರಾಜಕುಮಾರ ಚಿತ್ರ ಬಿಡುಗಡೆಯಾಗಿ 2 ವರ್ಷವಾಯ್ತು. 2015ರಲ್ಲಿ ಈ ಸಿನಿಮಾ ಕಥೆ ರೆಡಿಯಾಗಿತ್ತು, 2016ರಲ್ಲಿ ಚಿತ್ರೀಕರಣ ಶುರಯವಾಯ್ತು ಬಳಿಕ 2017ರಲ್ಲಿ ಚಿತ್ರ ತೆರೆಕಂಡಿತ್ತು. ಚಿತ್ರ ಬಿಡುಗಡೆಯಾದಾಗ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಪ್ರೋತ್ಸಾಹವನ್ನು ನಾನು ಜೀವನ ಪೂರ್ತಿ ಮರೆಯಲ್ಲ. ಈ ಚಿತ್ರ ನನಗೆ ತುಂಬಾ ಇಷ್ಟವಾಗಲು ಮುಖ್ಯ ಕಾರಣ ಅಂದ್ರೆ ಅದರ ಹೆಸರು. ನಮ್ಮ ತಂದೆಯವರ ಹೆಸರಿನಲ್ಲಿ ಈ ಸಿನಿಮಾ ಇದೆ. ಸಂತೋಷ್ ಅವರ ನಿರ್ದೇಶನ ಮಾಡಿದ್ದು, ಹೊಂಬಾಳೆ ಸಿನಿಮಾದ ವಿಜಯ್ ಅವರ ನಿರ್ಮಾಣ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂತು.

ಅದರಲ್ಲೂ ನೀವು ತೋರಿಸಿದ ಪ್ರೀತಿ, ಗೌರವವನ್ನು ಯಾವತ್ತಿಗೂ ಮರೆಯಲ್ಲ. ‘ರಾಜಕುಮಾರ’ ಚಿತ್ರ, ‘ಗೊಂಬೆ ಹೇಳುತೈತೆ’ ಹಾಡನ್ನೂ ಯಾವತ್ತು ಮರೆಯಲ್ಲ. ಈ ಚಿತ್ರದ ಬಗ್ಗೆ ಇಂದಿಗೂ ಜನರು ಮಾತನಾಡುತ್ತಾರೆ. ಇದು ತುಂಬಾ ಖುಷಿಕೊಡುತ್ತೆ. ಸಂತೋಷ್, ವಿಜಯ್ ಹಾಗೂ ಹರಿಕೃಷ್ಣ ಅವರಿಗೆ ಧನ್ಯವಾದ. ಅಭಿಮಾನಿಗಳ ಪ್ರೀತಿಗೂ ಧನ್ಯವಾದ ಎಂದು ಸಂತೋಷವನ್ನು ಹಂಚಿಕೊಂಡರು.

ಸದ್ಯ ಈ ವಿಡಿಯೋವನ್ನು 35 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 500ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

https://www.facebook.com/PuneethRajkumar/videos/336624367207812/

Comments

Leave a Reply

Your email address will not be published. Required fields are marked *