ನಾನು ಹುಷಾರಾಗಿದ್ದೀನಿ, ಅಪ್ಪು ಹಳೆಯ ಪೋಸ್ಟ್ ವೈರಲ್

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಆದರೂ ಅಪ್ಪು ಸಾವು ಅಭಿಮಾನಿಗಳಿಗೆ ಕಾಡುತ್ತಲೇ ಇದೆ. ಸದ್ಯ ಪುನೀತ್ ಈ ಹಿಂದೆ ಮಾಡಿರುವ ಪೋಸ್ಟ್‌ವೊಂದು ಸಖತ್ ವೈರಲ್ ಆಗುತ್ತಿದೆ. ಅಪ್ಪು(Appu) ಪೋಸ್ಟ್‌ಗೆ ಮತ್ತೆ ಹುಟ್ಟಿ ಬನ್ನಿ ಎಂದು ಮನವಿ ಮಾಡ್ತಿದ್ದಾರೆ.

ನಟ ಪುನೀತ್, ಅವರ ನೆನಪು, ಸಾಧನೆಗಳ ಮೂಲಕ ಎಲ್ಲರ ಮನದಲ್ಲಿ ಜೀವಂತವಾಗಿ ನೆಲೆಸಿದ್ದಾರೆ. ಅದರಲ್ಲೂ ಅಕ್ಟೋಬರ್ 29 ಅಭಿಮಾನಿಗಳ ಪಾಲಿಗೆ ಕರಾಳ ದಿನ ಎಂದರೆ ತಪ್ಪಾಗಲಾರದು. ಇಂದು ಅಪ್ಪು ಅಗಲಿ ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ಪುನೀತ್ ಪೋಸ್ಟೊಂದು ವೈರಲ್ ಆಗುತ್ತಿದೆ. ನಾನು ಹುಷಾರಾಗಿದ್ದೀನಿ, ಡೋಂಟ್ ವರಿ ಎಂಬ ಈ ಹಿಂದಿನ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:`ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

ನಾಲ್ಕು ವರ್ಷಗಳ ಹಿಂದೆ 2018ರಲ್ಲಿ ಪುನೀತ್ ಹುಷಾರಿಲ್ಲ ಎಂಬ ಗಾಳಿ ಸುದ್ದಿಯೊಂದು ಹಬ್ಬಿತ್ತು. ಈ ವೇಳೆ, ಕುಟುಂಬಸ್ಥರು, ಅಪ್ಪು ಅಭಿಮಾನಿಗಳು ಗಾಬರಿಯಾಗಿದ್ದರು. ನಾನು ಹುಷಾರಾಗಿದ್ದೀನಿ, ಡೋಂಟ್ ವರಿ ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಪೋಸ್ಟ್‌ ಮಾಡಿದ್ದರು. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಮತ್ತೆ ಇದೇ ಪೋಸ್ಟ್ ಹಾಕಿ ಸರ್ ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ.

ಇನ್ನೂ ಪುನೀತ್‌ ನಟನೆಯ ಕೊನೆಯ ಚಿತ್ರ ಗಂಧದಗುಡಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಕನಸಿನ ಸಿನಿಮಾಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *