ಪುನೀತ್ ವೀಡಿಯೋ ಫೂಟೇಜ್ ರಿವೀಲ್ ಮಾಡಿ – ಡಾ. ರಮಣ್ ರಾವ್ ವಿರುದ್ಧ ಅಪ್ಪು ಅಭಿಮಾನಿ ಕಿಡಿ

ಬೆಂಗಳೂರು: ಬರೀ ಮಾತಿನಲ್ಲಿ ಹೇಳಿದರೆ ಸಾಲುವುದಿಲ್ಲ. ವೀಡಿಯೋ ಫೂಟೇಜ್ ರಿವೀಲ್ ಮಾಡಿ. ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಡಾ. ರಮಣ್ ರಾವ್ ವಿರುದ್ಧ ಅಪ್ಪು ಅಭಿಮಾನಿ ಪರಮೇಶ್ವರ್ ಕಿಡಿ ಕಾರಿದ್ದಾರೆ.

ಪುನೀತ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರು ನೀಡಿದ್ದ ಅಪ್ಪು ಅಭಿಮಾನಿ ಅರುಣ್ ಪರಮೇಶ್ವರ್ ಇಂದು ಕಂಠೀರವ ಸ್ಟುಡಿಯೋ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕಂಪ್ಲೇಂಟ್ ಕೊಟ್ಟ ನಂತರ ಡಾ. ರಮಣ್ ರಾವ್ ಹೇಳಿಕೆ ನೋಡಿದ್ದೀನಿ. ವೈದ್ಯ ರಮಣ್ ರಾವ್ ವಿರುದ್ಧ ಇದೀಗ ಇನ್ನೂ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

ಪುನೀತ್ ಯಾವಾಗ ಬಂದರು, ಯಾವಾಗ ಕ್ಲಿನಿಕ್ ಇಂದ ಹೊರಗೆ ಹೋದರು ಎಂಬುವುದು ಗೊತ್ತಾಗಬೇಕು. ಪುನೀತ್ ಗೋಲ್ಡನ್ ಟೈಂ ಯಾಕೆ ಮಿಸ್ ಆಯಿತು ಎಂಬುವುದು ನಮ್ಮ ಪ್ರಶ್ನೆ. 15 ನಿಮಿಷ ಯಾಕೆ ಲೇಟ್ ಆಗಿದೆ ಅಂತ ಗೊತ್ತಾಗಬೇಕು. ನೀವು ಮುಚ್ಚಿಟ್ಟಿರುವುದರಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಮಾಧ್ಯಮಗಳಿಗೆ ಸಿಸಿಟಿವಿ ಫೂಟೇಜ್‍ಗಳನ್ನ ರಿವೀಲ್ ಮಾಡಲಿ. ಅಭಿಮಾನಿಗಳಿಗಿರುವ ಎಲ್ಲಾ ಅನುಮಾನಗಳನ್ನು ಬಗೆಹರಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತಂತೆ ನಾನು ಸದಾಶಿವನಗರ ಪೋಲೀಸರಿಗೆ ದೂರು ನೀಡಿದ್ದೇನೆ. ಬರೀ ಮಾತಲ್ಲೇ ಹೇಳೋದಲ್ಲ, ವೀಡಿಯೋ ಫೂಟೇಜ್ ರಿವೀಲ್ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ: ಇಮ್ರಾನ್ ಸರ್ದಾರಿಯಾ

Comments

Leave a Reply

Your email address will not be published. Required fields are marked *