ಕಾಡು ಪ್ರಾಣಿಗಳಿಗಿಟ್ಟ ನಾಡಬಾಂಬ್ ಸ್ಫೋಟ- ಬಾಲಕಿ ಸಾವು

crime

ಮುಂಬೈ: ಕಾಡು ಪ್ರಾಣಿಗಳನ್ನು ಕೊಲ್ಲಲು ಬಳಸುವ ನಾಡಸ್ಫೋಟಗೊಂಡು ಬಾಲಕಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳಿಗೆ ತೀವ್ರ ಗಾಯಗಾಳದ ಘಟನೆ ಮಹಾರಾಷ್ಟ್ರದ ಪುಣಾದ ವಾಡ್ಮುಖವಾಡಿ, ಚಾರ್ಹೋಲಿ ಬುದ್ರುಕ್‍ನ ಹೊಲದಲ್ಲಿ ನಡೆದಿದೆ.

ರಾಧಾ ಗೋಕುಲ್ ಗಾವ್ಲಿ(5) ಮೃತ ದುರ್ದೈವಿ. ಆರತಿ ಗಾವ್ಲಿ(4) ಮತ್ತು ರಾಜು ಗಾವ್ಲಿ ಗಾಯಗೊಂಡ ಮಕ್ಕಳು. ಪುಣೆ ನಗರದಿಂದ ಸುಮಾರು 20 ಕಿಮೀ ದೂರದಲ್ಲಿರುವ ವಾಡ್ಮುಖವಾಡಿಯ ಕಬ್ಬಿನ ಗದ್ದೆಯ ಬಳಿ ಈ ಮೂವರು ಮಕ್ಕಳು ಆಟವಾಡುತ್ತಿದ್ದರು. ಹೊಲದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆಂದು ಇಟ್ಟಿದ್ದ ನಾಡಬಾಂಬ್ ಇಡಲಾಗಿತ್ತು. ಅದರ ಮೇಲೆ ಬಾಲಕಿಯು ಆಕಸ್ಮಿಕವಾಗಿ ಎಡವಿ ಬಿದ್ದಿದ್ದಾರೆ. ಆ ವೇಳೆಗೆ ನಾಡಬಾಂಬ್ ಸ್ಫೋಟ ಸಂಭವಿಸಿದೆ. ಇದರಿಂದ ಒಂದು ಮಗು ಸಾವನ್ನಪ್ಪಿದೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

ಮಕ್ಕಳ ಪೋಷಕರು ಹಾಲು ಮಾರಾಟಗಾರುವುದರಿಂದ ಘಟನೆ ನಡೆದಾಗ ಸ್ಥಳದಲ್ಲಿ ಅವರು ಇರಲಿಲ್ಲ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಬಾಲಕಿಯು ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂಧಿಸಿ ಸ್ಫೋಟಕಗಳು ಅಲ್ಲಿಗೆ ಹೇಗೆ ಬಂದವು ಎಂಬುವ ಕುರಿತು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ದನ್ನೂ ಓದಿ:  ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ

Comments

Leave a Reply

Your email address will not be published. Required fields are marked *