ಕನ್ನಡ ಸಿನಿಮಾಗಳಿಗೆ ಬುಕ್‍ಮೈಶೋದಿಂದ ಅನ್ಯಾಯ: ಕೆ ಮಂಜು ವಾಗ್ದಾಳಿ

ಬೆಂಗಳೂರು: ಬುಕ್ ಮೈ ಶೋ ಹಣವನ್ನು ಪಡೆದು ಪರಭಾಷಾ ಸಿನಿಮಾಗಳಿಗೆ ಪ್ರಚಾರ ನೀಡಿ ಕನ್ನಡ ಚಿತ್ರಗಳನ್ನು ತುಳಿಯುತ್ತಿದೆ ಎಂದು ಸತ್ಯ ಹರಿಶ್ಚಂದ್ರ ಚಿತ್ರದ ನಿರ್ಮಾಪಕ ಕೆ ಮಂಜು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ, ಉತ್ತಮ ಸಿನಿಮಾ ಅಂತ ಕನ್ನಡ ಚಿತ್ರಗಳಿಗೆ ಪ್ರಚಾರ ನೀಡುವುದಿಲ್ಲ. ಹೀಗಾಗಿ ಪರಭಾಷೆ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಬುಕ್‍ಮೈ ಶೋ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡೋದಾಗಿ ಹೇಳಿದರು.

ಹಣ ಪಡೆದು ಬೇರೆ ಭಾಷೆಯ ಸಿನಿಮಾಗಳಿಗೆ ಬುಕ್ ಮೈ ಶೋ ಪ್ರಚಾರ ನೀಡುತ್ತಿದೆ. ನಾನು ಬುಕ್ ಮೈ ಶೋ ನವರನ್ನು ಇಲ್ಲಿಗೆ ಬಿಡುವುದಿಲ್ಲ, ಬುಕ್ ಮೈ ಶೋ ಪರ್ಸೆಂಟೇಜ್ ನಿಂದಾಗಿ ಕನ್ನಡ ಸಿನಿಮಾಗಳಿಗೆ ಹೊಡೆತವಾಗುತ್ತಿದೆ. ಹೀಗಾದರೆ ಕನ್ನಡ ಚಿತ್ರಗಳ ನಿರ್ಮಾಪಕರ ಗತಿಯೇನು? ಒಳ್ಳೆ ಸಿನಿಮಾಗಳು ಇದ್ದರೂ ಸಹ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಬೆಂಬಲ ಇಲ್ಲ. ಮಾಫಿಯಾ ಗ್ಯಾಂಗ್ ನಿಯಂತ್ರಿಸುತ್ತಿದ್ದು, ನಮ್ಮ ಕನ್ನಡ ಸಿನಿಮಾಗಳಿಗೆ ಮಾರ್ಕ್ಸ್ ಕೊಡೋದಕ್ಕೆ ಇವರು ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

Comments

Leave a Reply

Your email address will not be published. Required fields are marked *