ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮನೆ ಮುಂದೆ ಸಾರ್ವಜನಿಕ ವಾಹನ ಸಂಚಾರ ಬಂದ್!

ಮೈಸೂರು: ವಿಧಾನ ಪರಿಷತ್ ಸದಸ್ಯ ಹಾಗೂ ಅವರ ಕುಟುಂಬದವರಿಗೆ ಕಿರಿಕಿರಿಯಾಗಬಾರದೆಂಬ ಕಾರಣಕ್ಕೆ ಅವರ ಮನೆಯ ಮುಂದೆ ಸಾರ್ವಜನಿಕರು ಸಂಚರಿಸುವ ದಾರಿಯ ಮಧ್ಯದಲ್ಲಿ ಕಬ್ಬಿಣದ ರಾಡ್ ಗಳನ್ನು ನಿಲ್ಲಿಸಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಜಿಲ್ಲೆಯ ಇಟ್ಟಿಗೆಗೂಡು ಬಡಾವಣೆಯಲ್ಲಿ ಸಂದೇಶ್ ನಾಗರಾಜ್ ಅವರ ಮನೆ ಇದೆ. ಈ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳು ಸಾಗದಂತೆ ರಸ್ತೆಯ ಮಧ್ಯದಲ್ಲಿ ಕಬ್ಬಿಣಿದ ರಾಡ್‍ಗಳನ್ನು ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಿಧಾನ ಪರಿಷತ್ ಸದಸ್ಯನ ಮನೆ ಮುಂದೆ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಾಗಬಾರದು. ಸಾರ್ವಜನಿಕ ವಾಹನಗಳು ಸಂಚರಿಸಿದರೆ ಪರಿಷತ್ ಸದಸ್ಯರ ಕುಟುಂಬಕ್ಕೆ ಕಿರಿ ಕಿರಿಯಾಗುತ್ತೆ ಎಂದು ಹೀಗೆ ರಸ್ತೆಯನ್ನೆ ಬಂದ್ ಮಾಡಲಾಗಿದೆ.

ಸಂದೇಶ್ ನಾಗರಾಜ್ ಮನೆಯ ಪಕ್ಕದಲ್ಲೇ ಮಾಲ್ ಆಫ್ ಮೈಸೂರು ಇದೆ. ಇದರಿಂದ ಹೆಚ್ಚು ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್‍ನಿಂದ ಕಿರಿಕಿರಿ ಆಗುತ್ತಿರುವುದು ಸಹಜ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ತಂದು ರಸ್ತೆ ಬಂದ್ ಮಾಡಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಇದು ಮೈಸೂರು ಮಹಾನಗರ ಪಾಲಿಕೆ ಅಥವಾ, ಸಂಚಾರಿ ಪೊಲೀಸರ ಕೆಲಸ ಇರಬಹುದು ಎನ್ನಲಾಗುತ್ತಿದೆ. ಇದೇ ಮಾರ್ಗದ ಪಕ್ಕದ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ ಸಂದೇಶ್ ನಾಗರಾಜ್ ಮನೆ ಇರುವ ರಸ್ತೆಗೆ ಮಾತ್ರ ಕಬ್ಬಿಣದ ರಾಡ್ ಗಳನ್ನು ಹಾಕಿ, ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

Comments

Leave a Reply

Your email address will not be published. Required fields are marked *