ಚಿಲ್ಲರೆ ಅಂಗಡಿಯಲ್ಲಿ ತಲೆ ಎತ್ತಿದೆ ಆಸ್ಪತ್ರೆ – ಅಂಗಡಿ ಮಾಲೀಕನೇ ಇಲ್ಲಿ ಡಾಕ್ಟರ್

– ಬಾಗೇಪಲ್ಲಿ ಜನರ ಜೀವದ ಜೊತೆ ನಕಲಿ ವೈದ್ಯನ ಚೆಲ್ಲಾಟ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಚಿಲ್ಲರೆ ಅಂಗಡಿಯೊಂದರಲ್ಲಿ ಅಂಗಡಿ ಮಾಲೀಕ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಘಟನೆ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕು ಆಚೇಪಲ್ಲಿ ಕ್ರಾಸ್ ಬಳಿಯ ಅಯ್ಯಪ್ಪ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನ ನೀಡಲಾಗ್ತಿದೆ. ಅಂಗಡಿ ಮಾಲೀಕ ನರೇಶ್ ಎಂಬಾತ ವೈದ್ಯಕೀಯ ಪರೀಕ್ಷೆ ಮಾಡಿ ಮಾತ್ರೆ ಹಾಗೂ ಇಂಜೆಕ್ಷನ್ ನೀಡುತ್ತಾ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾನೆ.

ನಾನು ಆರ್‍ಎಂಪಿ ಡಾಕ್ಟರ್, ಕಳೆದ 3 ವರ್ಷಗಳಿಂದಲೂ ಇದೇ ರೀತಿ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಅಂಗಡಿ ಮಾಲೀಕ ನರೇಶ್ ಹೇಳಿದ್ದಾನೆ. 3 ವರ್ಷಗಳಿಂದಲೂ ಅಂಗಡಿ ಮಾಲೀಕ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ರೂ ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ವಿಫಲವಾಗಿರುವುದು ಸಾಬೀತಾಗಿದೆ.

 

Comments

Leave a Reply

Your email address will not be published. Required fields are marked *