ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಲ್ಲಿಪೂರ ವಾರಿತಾಂಡಾದ ಮಕ್ಕಳಿಗೆ ಕೊನೆಗೂ ಸಿಕ್ತು ಬಿಸಿಯೂಟ

ಯಾದಗಿರಿ: ಎಲ್ಲಾ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯಿದೆ. ಆದರೆ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿತಾಂಡದ ಸರ್ಕಾರಿ ಪ್ರಾಥಮೀಕ ಶಾಲೆಯ ಮಕ್ಕಳಿಗೆ ಎರಡು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿರಲಿಲ್ಲ.

ಈ ಕುರಿತು ಪಬ್ಲಿಕ್ ಟಿವಿ ಜೂನ್ 27ರಂದು ವಿಸ್ತೃತವಾಗಿ ವರದಿ ಮಾಡಿತ್ತು. ಪಬ್ಲಿಕ್ ಟಿವಿಯ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಶಾಲೆಯ ಆವರಣದಲ್ಲಿದ್ದ ಪಾಳು ಬಿದ್ದಿದ್ದ ಬಿಸಿಯೂಟ ಕೊಠಡಿಯನ್ನು ದುರಸ್ತಿಗೊಳಿಸಿ ಅಡುಗೆ ಮಾಡಲು ಬೇಕಾಗುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿರುವ ಕಾರಣ 1 ಕಿ.ಮೀ. ದೂರದಲ್ಲಿರುವ ಸಮನಾಪೂರ ಸರ್ಕಾರಿ ಶಾಲೆಯಿಂದ ಅಡುಗೆ ತರುವ ವ್ಯವಸ್ಥೆ ಸಹ ಸ್ಥಗಿತಗೊಂಡಿತ್ತು. ಇನ್ನು ಪಬ್ಲಿಕ್ ಟಿವಿ ವರದಿಗೆ ಬಿಸಿಯೂಟ ಯೋಜಾನಾ ಅಧಿಕಾರಿಳು ಸ್ಪಂದಿಸಿ ಬಿಸಿಯೂಟ ಯೋಜನೆಯಿಂದ ವಂಚಿತರಾದ ಆ ಶಾಲೆಯ ಮಕ್ಕಳಿಗೆ ಕೇವಲ 48 ಗಂಟೆಗಳಲ್ಲಿ ಬಿಸಿಯೂಟವನ್ನು ಒದಗಿಸಿದ್ದಾರೆ.

ಒಟ್ಟಾರೆ ಬಿಸಿಯೂಟ ಯೋಜನೆಯಿಂದ ವಂಚಿರಾದ ಮಕ್ಕಳಿಗೆ ಅನ್ನವನ್ನು ನೀಡಿ ಹಸಿವು ನೀಗಿಸುವ ಕೇಲಸವು ಅಕ್ಷರದಾಸೋಹ ಅಧಿಕಾರಿಗಳು ಮಾಡಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಸವಿದ ಮಕ್ಕಳು, ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ಪಬ್ಲಿಕ್ ಟಿವಿಗೆ ಅಭಿನಂದನೆಗಳನ್ನು ಸಲ್ಲಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

 

 

Comments

Leave a Reply

Your email address will not be published. Required fields are marked *