ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಭ್ರಷ್ಟ ಗ್ರಾಮ ಲೆಕ್ಕಿಗ ಅಮಾನತು

ಯಾದಗಿರಿ: ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೇತ್ತ ಯಾದಗಿರಿ ಕಂದಾಯ ಇಲಾಖೆ ಕೊನೆಗೂ ಭ್ರಷ್ಟಾಚಾರಿ ಗ್ರಾಮ ಲೆಕ್ಕಿಗ ಅಧಿಕಾರಿ ಅಮಾನತು ಮಾಡಿದೆ.

ಜಿಲ್ಲೆಯ ಸುರಪುರ ತಾಲೂಕಿನ ಮುಷ್ಟಳ್ಳಿಯಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ನಾಶವಾಗಿತ್ತು. ಸಂತ್ರಸ್ತ ರೈತರಿಗೆ ಸರ್ಕಾರ ಸಾವಿರಾರು ರೂಪಾಯಿ ಪರಿಹಾರ ಸಹ ನೀಡಿತ್ತು. ಆದರೆ ನೆರೆ ಪರಿಹಾರ ವಿತರಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದು ಅರ್ಹರಲ್ಲದ ರೈತರ ಖಾತೆಗೆ ಹಣ ವರ್ಗಾವಣೆ ಆಗಿತ್ತು. ಇದನ್ನು ಓದಿ: ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ – ರಿಯಾಲಿಟಿ ಚೆಕ್‍ನಲ್ಲಿ ಬಯಲು

ಈ ಭ್ರಷ್ಟಾಚಾರದ ಹಿಂದೆ ಗ್ರಾಮ ಲೆಕ್ಕಿಗ ಅಧಿಕಾರಿ ಶ್ರೀನಿವಾಸ ದೇಶಪಾಂಡೆ ಕೈವಾಡವಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿ, ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳಿದಿತ್ತು. ಪಬ್ಲಿಕ್ ಟಿವಿ ವರದಿಯ ಬಳಿಕ ನಿದ್ದೆಯಿಂದ ಎದ್ದಿರುವ ಜಿಲ್ಲಾಡಳಿತ ಕೊನೆಗೂ ಭ್ರಷ್ಟ ಅಧಿಕಾರಿಗೆ ಅಮಾನತು ಮಾಡಿದ್ದಾರೆ.

ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡರ ಅಮಾನತು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪಬ್ಲಿಕ್ ಟಿವಿಯ ವರದಿಗೆ ಅಭಿನಂದನೆಗಳು ಸಲ್ಲಿರುವ ಆಯುಕ್ತರು, ಮರು ಸರ್ವೆ ಮಾಡಿ ಅರ್ಹ ರೈತ ಜಮೀನುಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *