ಸೈಕಲ್‍ನಲ್ಲೇ ಬಂದು ಪರಿಸರ ಜಾಗೃತಿ ಮೂಡಿಸ್ತಾರೆ ಕೆಎಲ್‍ಇ ಕಾಲೇಜಿನ ಪ್ರಿನ್ಸಿಪಾಲ್!

ಬೆಳಗಾವಿ: ರಾಜ್ಯದ ಪ್ರತಿಷ್ಠಿತ ಖಾಸಗಿ ಕಾಲೇಜ್‍ನ ಪ್ರಾಂಶುಪಾಲರಾಗಿ ಲಕ್ಷಾಂತರ ರೂಪಾಯಿ ಸಂಬಳ ಪಡೆದರೂ ಇವರು ಮಾತ್ರ ಸೈಕಲ್‍ನಲ್ಲೇ ಕಾಲೇಜ್‍ಗೆ ಬರುತ್ತಾರೆ.

ಹೌದು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆಎಲ್‍ಇ ಎಂಜಿನಿಯರ್ ಕಾಲೇಜ್‍ನ ಪ್ರಿನ್ಸಿಪಾಲ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಪ್ರತಿನಿತ್ಯ ಸೈಕಲ್ ನಲ್ಲಿ ಬಂದು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಕಾಲೇಜ್‍ಗೆ ಬಂದ ಮೇಲೂ ಕ್ಯಾಂಪಸ್ ನಲ್ಲಿ ಸೈಕಲ್ ನಲ್ಲಿ ಒಂದು ರೌಂಡ್ ಹೋಗಿ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುತ್ತಾರೆ.

ಖಾಸಗಿ ಕಾಲೇಜಿನಲ್ಲಿ ಲಕ್ಷ-ಲಕ್ಷ ಸಂಬಳ ಪಡೆದು ಜುಂ ಅಂತ ಕಾರ್‍ನಲ್ಲಿ ಬರದ ಸಿದ್ದರಾಮಪ್ಪ ಇಟ್ಟ ಅವರು, ಸೈಕಲ್‍ನಲ್ಲಿ ಬಂದು ಸಮಾಜದ ಆರೋಗ್ಯ, ಸ್ವಂತ ಆರೋಗ್ಯ ಎರಡನ್ನೂ ಕಾಪಾಡುತ್ತಿದ್ದಾರೆ.

 

Comments

Leave a Reply

Your email address will not be published. Required fields are marked *