ಕೋಲಾರ: ಬಯಲುಸೀಮೆ ಕೋಲಾರದಲ್ಲಿ ಸಾವಿರ ಅಡಿಗೂ ನೀರು ಸಿಗಲ್ಲ ಅಂತ ಕೃಷಿ ಬಿಟ್ಟವರೇ ಹೆಚ್ಚು. ಆದರೆ ನಮ್ಮ ಇವತ್ತಿನ ಪಬ್ಲಿಕ್ ಹೀರೋ ಶಿವಮೂರ್ತಿ ಅವರು ತ್ಯಾಜ್ಯ ನೀರನ್ನ ಬಳಸಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ.
ಕೋಲಾರ ತಾಲೂಕು ಜಂಗಮಗುರ್ಜೇನಹಳ್ಳಿಯ ರೈತ ಶಿವಮೂರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಶಿವಮೂರ್ತಿ ಫಲವತ್ತಾದ ಸೀಬೆ ಮತ್ತು ಕುಂಬಳಕಾಯಿ ತೋಟ ಮಾಡಿ ಇತರ ರೈತರಿಗೂ ಮಾದರಿಯಾಗಿದ್ದಾರೆ. ಗ್ರಾಮದ ಕೊಳಚೆ ನೀರನ್ನ ಕೃಷಿಹೊಂಡದಲ್ಲಿ ಶೇಖರಿಸಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಸುಮಾರು 2 ಎಕರೆ ಪ್ರದೇಶದಲ್ಲಿ ಬಂಗಾರದಂತ ಬೆಳೆ ಬೆಳೆದಿದ್ದಾರೆ.
ಶಿವಮೂರ್ತಿ ಅವರು ಮೊದಲಿಗೆ ಕೊಳಚೆ ನೀರನ್ನ ಬಳಸಲು ಮುಂದಾದಾಗ ಗ್ರಾಮಸ್ಥರು ಹಾಸ್ಯದ ಮಾತುಗಳನ್ನು ಆಡಿದ್ದರು. ಆದ್ರೀಗ ಬೆಕ್ಕಸ ಬೆರಗಾಗಿ ಶಿವಮೂರ್ತಿ ತೋಟದ ಬೆಳೆಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದಾರೆ.
https://www.youtube.com/watch?v=YVXoNDEB6vs

Leave a Reply