ಹಾವೇರಿ: ಅಧಿಕಾರಿಗಳು ಅದರಲ್ಲೂ ಜಿಲ್ಲಾಧಿಕಾರಿಗಳು ಮನಸು ಮಾಡಿದ್ರೆ ಜಿಲ್ಲೆಯ ಚಿತ್ರಣವೇ ಬದಲಾಗತ್ತದೆ ಅನ್ನೋದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾವೇರಿ ಡಿ.ಸಿ. ವೆಂಕಟೇಶ್ ಅವರೇ ನಿದರ್ಶನ. ತಮ್ಮ ಜನಪರ ಕಾಳಜಿಯ ಸೇವೆಯಿಂದ ಜಿಲ್ಲೆಯ ಭವಿಷ್ಯವೇ ಬದಲಾಗುತ್ತಿದೆ.
2 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿ ಬಂದಿರೋ ವೆಂಕಟೇಶ್ ಅವರು, ಹತ್ತು-ಹಲವು ಜನೋಪಯೋಗಿ ಯೋಜನೆಗಳನ್ನ ರೂಪಿಸಿದ್ದಾರೆ. ಬಡಜನರ ಆರೋಗ್ಯಕ್ಕಾಗಿ `ಪುಣ್ಯಕೋಟಿ ಕುಠೀರ’ ಅನ್ನೋ ಆಸ್ಪತ್ರೆ ನಿರ್ಮಿಸಿದ್ದಾರೆ. ಪ್ರತಿದಿನ ಸಾವಿರಾರು ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದಾರೆ.

ಬ್ಯಾಡಗಿ ತಾಲೂಕನ್ನ ರಾಜ್ಯದಲ್ಲಿಯೇ ಪೋಡಿಮುಕ್ತ ತಾಲೂಕಾಗಿ ಮಾಡಿದ್ದಾರೆ. ಹಾವೇರಿ ತಾಲೂಕಿನ ಪ್ರತಿ ಗ್ರಾಮದ ಸರ್ಕಾರಿ ಜಮೀನು ಗುರುತಿಸಿ ಸ್ಮಶಾನ ಕಲ್ಪಿಸಿದ್ದಾರೆ. ಶೌಚಾಲಯ ಜಾಗೃತಿ ಮೂಡಿಸ್ತಿದ್ದಾರೆ. ಸಿಬ್ಬಂದಿಯನ್ನೂ ಜೊತೆಗೆ ಕರೆದುಕೊಂಡು ಕೆರೆಯಲ್ಲಿ ಹೂಳೆತ್ತಿ ಶ್ರಮಾದಾನ ಮಾಡಿದ್ದಾರೆ. ವನ್ಯಜೀವಿಗಳು-ಪಕ್ಷಿಗಳು- ಜಾನುವಾರುಗಳಿಗೆ ನೀರಿನ ಬರ ಕಾಡದಿರಲೆಂದು ರಸ್ತೆಬದಿ ನೀರಿನ ತೊಟ್ಟಿಗಳನ್ನ ನಿರ್ಮಿಸಿದ್ದಾರೆ. ಜಿಲ್ಲಾ ಕಾರಾಗೃಹದ 10 ಎಕರೆ ಭೂಮಿಯಲ್ಲಿ ವಿವಿಧ ಕೆಲಸ ಮಾಡಿಸಿ ಕೈದಿಗಳ ಮನಪರಿವರ್ತನೆ ಮಾಡ್ತಿದ್ದಾರೆ.
ಇಷ್ಟು ಮಾತ್ರವಲ್ಲದೇ ರಾಜ್ಯದಲ್ಲಿಯೇ ಅಟಲ್ ಜೀ ಸ್ನೇಹ ಕೇಂದ್ರದ ಮೂಲಕ ಜಿಲ್ಲೆಯ ಜನರಿಗೆ ಬೇಕಾದ ಸೇವೆಯನ್ನ ನೀಡಿ ಪ್ರಥಮ ರ್ಯಾಂಕ್ ಪಡೆಯುವಂತೆ ಮಾಡಿದ್ದಾರೆ.
https://www.youtube.com/watch?v=rjJRaB7t9HI

Leave a Reply