ಕುಡಿದ ಅಮಲಿನಲ್ಲಿ ಅನುಚಿತ ವರ್ತನೆ- ಪೇದೆಗೆ ಸಾರ್ವಜನಿಕರಿಂದ ಗೂಸಾ

ಗದಗ: ಅನುಚಿತ ವರ್ತನೆ ಆರೋಪದ ಹಿನ್ನಲೆಯಲ್ಲಿ ಡಿ.ಆರ್ ಪೊಲೀಸ್ ಪೇದೆಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

ಗದಗ ಸಶಸ್ತ್ರ ಮೀಸಲು ಪಡೆ ಪೇದೆ ಚಂದ್ರು ಲಮಾಣಿಗೆ ಸಾರ್ವಜನಿಕರೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಚಂದ್ರು ಕುಡಿದ ಅಮಲಿನಲ್ಲಿ ಸಾರ್ವಜನಿಕರೊಂದಿಗೆ ಮನಬಂದಂತೆ ಮಾತನಾಡುತ್ತಿದ್ದ ಹಾಗೂ ಮಹಿಳೆಯರ ಎದುರು ಅನುಚಿತ ವರ್ತನೆ ತೋರುತ್ತಿದ್ದ ಎಂದು ಆರೋಪಿಸಲಾಗಿದೆ.

ಇವನ ವರ್ತನೆ ನೋಡಿ ಸ್ಥಳೀಯರು ಪೊಲೀಸಪ್ಪನಿಗೆ ಒಂದಿಷ್ಟು ಕೈ ರುಚಿ ತೋರಿಸಿದ್ದಾರೆ. ಒಂದು ವಾರದ ಹಿಂದೆ ನಗರದ ಮುಳಗುಂದ ನಾಕಾದಲ್ಲಿ ಈ ಘಟನೆ ನಡೆದಿದೆ. ಡಿ. ಆರ್ ಪೇದೆಗೆ ಧರ್ಮದೇಟು ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾರ್ವಜನಿಕರಿಂದ ಧರ್ಮದೇಟು ತಿಂದ ಡಿ.ಆರ್ ಪೇದೆ ಚಂದ್ರು ಲಮಾಣಿ ಇದೀಗ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *