PSI ಅಕ್ರಮ – ಪರೀಕ್ಷಾ ಕೇಂದ್ರದಲ್ಲಿ ಡೀಲಿಂಗ್ ಹೇಗೆ ನಡೀತಿತ್ತು? ಒಬ್ಬರಿಗೆ ಎಷ್ಟು ಲಕ್ಷ?

ಬೆಂಗಳೂರು: ಪಿಎಸ್‍ಐ ಪರೀಕ್ಷೆಯ ಅಕ್ರಮದಲ್ಲಿ ಬಗೆದಷ್ಟು ರಹಸ್ಯ ಬಯಲಾಗುತ್ತಿದ್ದು, ಜ್ಞಾನಜ್ಯೋತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಡಿಲಿಂಗ್ ಹೇಗೆ ನಡೆಯುತಿತ್ತು ಎಂಬುವುದರ ಬಗ್ಗೆ ಪ್ರಿನ್ಸಿಪಾಲ್ ಆಗಿರುವ ಆರೋಪಿ ಕಾಶಿನಾಥ ಬಹಿರಂಗ ಪಡೆಸಿದ್ದಾನೆ.

ಸಿಐಡಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು ಸ್ಫೋಟಕ ವಿಚಾರಗಳು ಲಭ್ಯವಾಗುತ್ತಿದೆ. 2014ರಿಂದ ಈ ರೀತಿಯ ಕೃತ್ಯ ಎಸಗುತ್ತಿದ್ದೆ ಎಂದು ಕಾಶಿನಾಥ ಹೇಳಿರುವುದಾಗಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಉಸ್ಮಾನಿಯಾ ವಿವಿಯಲ್ಲಿ ರಾಹುಲ್ ಸಂವಾದಕ್ಕೆ ಬ್ರೇಕ್ – ಹೈಕೋರ್ಟ್‍ನಿಂದ ಅರ್ಜಿ ವಜಾ

KARNATAKA PSI EXAM

ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಲ್ಕುಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಕ್ಯಾಂಡಿಡೇಟ್‍ಗಳಿಂದ ಅರ್ಧ ಹಣ ಪಾವತಿ ಆಗುತ್ತಿದ್ದಂತೆ ಆಗುತ್ತಿದ್ದಂತೆ ರೋಲ್ ನಂಬರ್ ಸ್ಕೂಲ್ ಪ್ರಿನ್ಸಿಪಾಲ್‍ಗೆ ಹೋಗುತ್ತಿತ್ತು. ನಂತರ ಜ್ಞಾನ ಜ್ಯೋತಿ ಸ್ಕೂಲ್ ಪ್ರಿನ್ಸಿಪಾಲ್ ಕಾಶಿನಾಥ ಡೀಲಿಂಗ್ ಪಡೆಯುತ್ತಿದ್ದ. ಡೀಲಿಂಗ್ ಪಡೆದು ಇನ್ವಿಜಿಲೇಟರ್‌ಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದ.

545 ಪಿಎಸ್‍ಐ ಪೋಸ್ಟ್ ಪರೀಕ್ಷೆ ಯಲ್ಲಿ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರಕ್ಕೆ ಸಾವಿತ್ರಿ, ಸುಮಾ, ಅರ್ಚನಾ, ಸುನಂದಾ, ಸಿದ್ದಮ್ಮ ಇನ್ವಿಜಿಲೇಟರ್‌ಗಳಾಗಿ ಹೋಗಿದ್ದರು. ಈ ಐವರಿಗೂ ಕಾಶಿನಾಥ್ ಅಭ್ಯರ್ಥಿಗಳ ರೋಲ್ ನಂಬರ್ ಮೆಸೇಜ್ ಮಾಡುತ್ತಿದ್ದನು. ನಂತರ ಆ ರೋಲ್ ನಂಬರ್‌ನಲ್ಲಿರುವ ಕ್ಯಾಂಡಿಡೇಟ್‍ಗಳಿಗೆ ಇದೇ ಮೇಲ್ವಿಚಾರಕರು ಉತ್ತರಗಳ ಚೀಟಿಯನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಇದೇ ವೇಳೆ ಬೇರೆ ಅಭ್ಯರ್ಥಿಗಳು ನೋಡಬಹುದು ಅಂತ ಎಕ್ಸಾಂನ ಬಳಿಕ ಮೇಲ್ವಿಚಾರಕರು ತಿದ್ದುವುದಾಗಿ ಹೇಳುತ್ತಿದ್ದರು.

Divya hagaragi (2)

ಕೇವಲ ವಾಟ್ಸಪ್ ಮೂಲಕವೇ ಕಾಶಿನಾಥ ಮೇಲ್ವಿಚಾರಕರಿಗೆ ಎಲ್ಲ ಮಾಹಿತಿಯನ್ನು ನೀಡುತ್ತಿದ್ದ. ಈ ಕೆಲಸವನ್ನು ಮಾಡಲು ಒಬ್ಬೊಬ್ಬ ಮೇಲ್ವಿಚಾರಕರಿಗೆ ಕಾಶಿನಾಥ 1 ಲಕ್ಷ ರೂಪಾಯಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನವೇ ನೀಡುತ್ತಿದ್ದ. ಹಣವನ್ನು ಪಡೆದ ಬಳಿಕ ಇವರು ಕೊಠಡಿಯ ಪರಿವೀಕ್ಷಣೆಗೆ ತೆರಳುತ್ತಿದ್ದರು. ಈ ಸ್ಕ್ಯಾಮ್‍ನಲ್ಲಿ ಕಾಶಿನಾಥ ನಾಲ್ಕು ಲಕ್ಷ ರೂಪಾಯಿ ಇಟ್ಟುಕೊಳ್ಳುತ್ತಿದ್ದನು. ಇದೀಗ ಸಿಐಡಿ  ಪೊಲೀಸರ ಮುಂದೆ 2014 ರಿಂದ ವ್ಯವಹಾರ ಮಾಡುತ್ತಿದ್ದೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ದಿವ್ಯಾ, ಮಂಜುನಾಥ ಹೇಳುತ್ತಿದ್ದಂತೆ ನನಗೆ ಬೇಕಾದ ಮೇಲ್ವಿಚಾರಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾನೆ. ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ

ಮತ್ತಷ್ಟು ತನಿಖೆ ನಡೆಸಬೇಕಾದ ಕಾರಣ ಮತ್ತೆ ಎಂಟು ದಿನಗಳ ಕಾಲ ಮಂಜುನಾಥ ಮೇಲ್ಕುಂದಿ, ಕಾಶಿನಾಥ, ಅಭ್ಯರ್ಥಿ ಶ್ರೀಧರನನ್ನು ಕಸ್ಟಡಿಗೆ ಪಡೆಯಲಾಗಿದೆ. ಈ ಹಿಂದೆ ಸೆಲೆಕ್ಟ್ ಆದ ವ್ಯಕ್ತಿಗಳ ಮಾಹಿತಿಯನ್ನು ಕೂಡ ಕಾಶಿನಾಥ ಬಾಯ್ಬಿಟ್ಟಿದ್ದಾನಂತೆ. ಈಗಿರುವ ಹಾಲಿ ಪಿಎಸ್‍ಐಗಳ ಗುಂಪಲ್ಲೂ ಗೋಲ್ ಮಾಲ್ ನಡೆದು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಕಾಶಿನಾಥ ಹೇಳಿದ್ದಾನೆ.

ಮತ್ತೊಂದೆಡೆ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಅಕ್ರಮಗಳಿಗೆ ಪೊಲೀಸರೇ ಶ್ರೀರಕ್ಷೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಪಾಲು ಬಹಳ ದೊಡ್ಡದಿದೆ. ಅದಕ್ಕೆ ಅರೆಸ್ಟ್ ಆಗಿ ಸಿಐಡಿ ಕಸ್ಟಡಿಯಲ್ಲಿರೋ ಅಭ್ಯರ್ಥಿಗಳ ಸಂಖ್ಯೆ ಸಾಕ್ಷಿ. ಅಲ್ಲದೆ, ಬಹುತೇಕ ಟಾಪರ್ಸ್‍ಗಳೇ ಹಿಟ್ ಲಿಸ್ಟ್‍ನಲ್ಲಿದ್ದಾರೆ. ಪಿಎಸ್‍ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‍ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

ಈ ಪ್ರಕರಣದಲ್ಲಿ ನಾಲ್ವರು ಡಿವೈಎಸ್‍ಪಿ, ಇಬ್ಬರು ಸಿಪಿಐಗಳು ಭಾಗಿಯಾಗಿದ್ದು, ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ಮೂವರು ಡಿವೈಎಸ್‍ಪಿಗಳ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಓರ್ವ ಡಿವೈಎಸ್‍ಪಿಯ ಎರಡು ಮೊಬೈಲ್ ಸೀಜ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *